ಮಧ್ಯಂತರ ಚುನಾವಣೆ ಎದುರಾಗದು: ಡಿಸಿಎಂ ಡಾ.ಜಿ.ಪರಮೇಶ್ವರ್

Update: 2019-06-27 06:53 GMT

ಬೆಂಗಳೂರು, ಜೂ.27: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ‌ ಮಧ್ಯಂತರ ಚುನಾವಣೆ ಬರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಮಧ್ಯಂತರ ಚುನಾವಣೆ ಸಂಬಂಧ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆಯೇ ಹೊರತು ಪಕ್ಷದ ಅಭಿಪ್ರಾಯವಲ್ಲ.‌ ಸಮ್ಮಿಶ್ರ ಸರಕಾರದಲ್ಲಿ ಸಾಕಷ್ಟು ಯೋಜನೆ ಹಾಕಿಕೊಂಡು ಅದರ ಅನುಷ್ಠಾನದತ್ತ ಸಾಗುತ್ತಿದ್ದೇವೆ.‌ ಜನರಿಗೆ ನೀಡಿದ ಭರವಸೆಯಂತೆ ಕೆಲಸ ಮಾಡುತ್ತಿದ್ದೇವೆ ಎಂದರು.

ಗ್ರಾಮ ವಾಸ್ತವ್ಯ ಬಗ್ಗೆ ಬಿಜೆಪಿಗರ ಟೀಕೆ ಸರಿಯಲ್ಲ. ಸರಕಾರವನ್ನು ಟೀಕೆ ಮಾಡುವವರು ನೇರವಾಗಿ ವಿಧಾನಸೌಧ ಅಥವಾ ಬಿಜೆಪಿ ಕಚೇರಿಯಲ್ಲಿ ಮಾಡಬಹುದಿತ್ತು.‌ ಆದರೂ ಪಾದಯಾತ್ರೆ ಮಾಡುವ ಮೂಲಕ ಟೀಕಿಸುವ ಏನಿತ್ತು. ಸರಕಾರವೇ ಜನರ ಬಳಿ ಹೋಗುವುದನ್ನು ಟೀಕೆ ಮಾಡಿದರೆ ಹೇಗೆ? ಗಾಂಧೀಜಿ ಕೂಡ ಗ್ರಾಮ ವಾಸ್ತವ್ಯ ಮಾಡಿದ್ದರು. ಅವರನ್ನು ಇವರು ಪ್ರಶ್ನೆ ಮಾಡುತ್ತಾರಾ ಎಂದರು?

ನಾನು ಚುನಾವಣೆ ಮುಂಚೆಯೂ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದೆ.‌ ಈಗಲೂ ನನ್ನ ಕ್ಷೇತ್ರದಲ್ಲಿ ಮಾಡುತ್ತಿದ್ದೇನೆ. ಈ ಶನಿವಾರ ಬೆಂಗಳೂರಿನಲ್ಲೂ ಜನಸಂಪರ್ಕ ಸಭೆ ಮಾಡಲಿದ್ದೇನೆ.‌ ಅಗತ್ಯ ಬಿದ್ದರೆ ರಾಜ್ಯಾದ್ಯಂತ ಮಾಡಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News