ಸಾಮಾಜಿಕ ಮಾದ್ಯಮ ಸುಳ್ಳು ಸುದ್ದಿ ಹರಡಬಾರದು: ಮಮತಾ ಬ್ಯಾನರ್ಜಿ

Update: 2019-06-30 18:47 GMT

ಕೋಲ್ಕತಾ, ಜೂ. 30: ಸಾಮಾಜಿಕ ಮಾದ್ಯಮವನ್ನು ಮಾನವನ ಒಳಿತಿಗಾಗಿ ಬಳಸಬೇಕು ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವಿವಾರ ಒತ್ತಿ ಹೇಳಿದರು. ವಿಶ್ವ ಸಾಮಾಜಿಕ ಮಾದ್ಯಮ ದಿನವಾದ ರವಿವಾರ ಮಾತನಾಡಿದ ಅವರು, ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿಯನ್ನು ಸಾಮಾಜಿಕ ಮಾದ್ಯಮದಲ್ಲಿ ಹರಡಬಾರದು ಎಂದರು.

‘‘ಇಂದು ವಿಶ್ವ ಮಾದ್ಯಮ ದಿನ. ಸಾಮಾಜಿಕ ಮಾದ್ಯಮವನ್ನು ಮಾನವರ ಒಳಿತಿಗಾಗಿ ಬಳಸಬೇಕು. ಅಪಾಯಕಾರಿ ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿ ಪಸರಿಸಲು ಸಾಮಾಜಿಕ ಜಾಲ ತಾಣ ದುರ್ಬಳಕೆ ಮಾಡಬಾರದು’’ ಎಂದು ಮಮತಾ ಬ್ಯಾನರ್ಜಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News