ಪುತ್ರಿಯನ್ನು ಹತ್ಯೆಗೈದು ಗಂಗಾ ನದಿಗೆಸೆದ ಹೆತ್ತವರು
Update: 2019-07-07 17:11 GMT
ಬೆರ್ಹಾಂಪುರ, ಜು. 7: ಸಮೀಪದ ಗ್ರಾಮದ ಬಾಲಕನೊಂದಿಗೆ ಸಂಬಂಧ ತ್ಯಜಿಸಲು ನಿರಾಕರಿಸಿದ 16 ವರ್ಷದ ಪುತ್ರಿಯನ್ನು ಹತ್ಯೆಗೈದು ಮೃತದೇಹವನ್ನು ಗಂಗಾ ನದಿಯಲ್ಲಿ ಎಸೆದೆ ದಂಪತಿಯನ್ನು ಪಶ್ಚಿಮಬಂಗಾಳ ಪೊಲೀಸರು ಬಂಧಿಸಿದ್ದಾರೆ.
ಮಾಲ್ಡಾ ಜಿಲ್ಲೆಯ ಭೂಟ್ನಿ ಪ್ರದೇಶದ ಮಹೇಂದ್ರತೋಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಧಿರೇನ್ ಮಂಡಲ್ (45) ಹಾಗೂ ಅವರ ಪತ್ನಿ ಸುಮತಿ (49) ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ.
ಹತ್ಯೆಯಾದ ಬಾಲಕಿ ಪ್ರತಿಮಾ ಮಂಡಲ್ (16) ಪಶ್ಚಿಮ ನಾರಾಯಣಪುರದ ಪ್ರೌಢ ಶಾಲೆಯಲ್ಲಿ 10ನೇ ತರಗತಿ ಕಲಿಯುತ್ತಿದ್ದಳು. ಈಕೆ ಸಮೀಪದ ಹಳ್ಳಿಯ ಬಾಲಕ ಅಚಿಂತ ಮಂಡಲ್ (17) ನೊಂದಿಗೆ ಸಂಬಂಧ ಹೊಂದಿದ್ದಳು.
ಈ ಕೃತ್ಯದಲ್ಲಿ ಮರ್ಯಾದೆ ಹತ್ಯೆಯ ಕಾರಣವನ್ನು ಕೂಡ ಪೊಲೀಸರು ಅಲ್ಲಗಳೆದಿಲ್ಲ. ‘‘ಒಂದೇ ಉಪನಾಮವನ್ನು ಹೊಂದಿರುವ ಬಾಲಕ ಕೆಳ ಜಾತಿಗೆ ಸೇರಿದವನು ಎಂದು ದಂಪತಿ ಹೇಳಿರುವುದಾಗಿ’’ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.