ಜೆಡಿಎಸ್‌ನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ: ಬಂಡೆಪ್ಪ ಕಾಶೆಂಪೂರ್

Update: 2019-07-09 16:20 GMT

ಬೆಂಗಳೂರು, ಜು.9: ಜೆಡಿಎಸ್‌ನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಅಂತಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದೇವೆ. ಯಾವಾಗ ಮೇಲಿನಿಂದ ಕರೆ ಬರುತ್ತದೆಯೋ ಆವಾಗ ಇಲ್ಲಿಂದ ಹೋಗುತ್ತೇವೆ ಎಂದು ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

ದೇವನಹಳ್ಳಿ ಬಳಿ ಇರುವ ಖಾಸಗಿ ರೆಸಾರ್ಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಜೆಡಿಎಸ್ ಪಕ್ಷದ ಎಲ್ಲರೂ ಒಗ್ಗಟ್ಟಾಗಿ ಇರಬೇಕು ಅಂತ ಹೇಳಿದ್ದರಿಂದ ಇಲ್ಲಿಗೆ ಬಂದಿದ್ದೇವೆ. ಎಷ್ಟು ದಿನ ಇಲ್ಲಿ ಇರುತ್ತೇವೆ ಅನ್ನೋದು ನಮಗೆ ಗೊತ್ತಿಲ್ಲ. ಸಿಎಂ ಮತ್ತು ಹೈಕಮಾಂಡ್ ಯಾವಾಗ ಕರೆಯುತ್ತಾರೋ ಆಗ ಇಲ್ಲಿಂದ ತೆರಳುತ್ತೇವೆ ಎಂದು ತಿಳಿಸಿದರು.

ಪ್ರತಿ ಮಂಗಳವಾರ ಮಾರಮ್ಮ ದೇವಿಯ ದರ್ಶನ ಪಡೆಯುವುದು ನನ್ನ ಪದ್ಧತಿ. ಅದೇ ರೀತಿಯಲ್ಲಿ ಇಂದು ಕೂಡ ದೇವನಹಳ್ಳಿಯಲ್ಲಿರುವ ಮಾರಮ್ಮ ದೇವಾಲಯಕ್ಕೆ ಹೋಗಿ ಬಂದಿರುವೆ ಎಂದರು. ಇದೇ ವೇಳೆ ರಾಜೀನಾಮೆ ನೀಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸದೇ ರೆಸಾರ್ಟ್‌ಗೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News