ಲಂಚಕ್ಕೆ ಬೇಡಿಕೆ ಆರೋಪ: ನಾಲ್ವರು ಅಧಿಕಾರಿಗಳನ್ನು ಬಂಧಿಸಿದ ಎಸಿಬಿ

Update: 2019-07-13 18:23 GMT

ಬೆಂಗಳೂರು, ಜು.13: ಲಂಚ ಸ್ವೀಕರಿಸುತ್ತಿರುವ ಆರೋಪದಡಿ ಕಾರ್ಮಿಕ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಎಸಿಬಿ ಬಂಧಿಸಿ, ವಿಚಾರಣೆಗೊಳಪಡಿಸಿದೆ.

ಕಾರ್ಮಿಕ ಇಲಾಖೆ ಅಧಿಕಾರಿ ಶಿವಾನಂದ, ಹಿರಿಯ ಕಾರ್ಮಿಕ ನಿರೀಕ್ಷಕ ಗೋವಿಂದರಾಜು, ವೆಂಕಟೇಶ್, ಚೌಹಾಣ್ ಬಂಧಿತ ಆರೋಪಿಗಳು ಎಂದು ಎಸಿಬಿ ತಿಳಿಸಿದೆ.

ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಮಿಕ ಇಲಾಖೆಗೆ ಸೇರಿದ ಕೌಶಲ್ಯಭವನ ಕಟ್ಟಡದ ಸಮೀಪದ ರಸ್ತೆಯಲ್ಲಿ ದೂರುದಾರರಿಂದ ಲಂಚ ಸ್ವೀಕರಿಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ನೇರವಾಗಿ ಬಂಧಿಸಿದ್ದಾರೆ.

ಕೃತ್ಯಕ್ಕೆ ಬಳಸಿದ 13,09,500 ರೂ.ನಗದು, 2 ಕಾರು, ಒಂದು ಲ್ಯಾಪ್‌ಟಾಪ್, 4 ಮೊಬೈಲ್, 3 ಪೆನ್‌ಡ್ರೈವ್‌ಗಳನ್ನು ಜಪ್ತಿ ಮಾಡಿ, ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News