ಮೈತ್ರಿ ಸರಕಾರ ಪತನಕ್ಕೆ ಕ್ಷಣಗಣನೆ: ಶಾಸಕ ಮಾಧುಸ್ವಾಮಿ

Update: 2019-07-14 17:10 GMT

ಬೆಂಗಳೂರು, ಜು.14: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪತನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅತಿ ಶೀಘ್ರದಲ್ಲಿಯೇ 105 ಶಾಸಕರನ್ನು ಗೆಲ್ಲಿಸಿದ್ದ ಜನರ ಅಪೇಕ್ಷೆ ಈಡೇರಲಿದೆ ಎನ್ನುವ ಮೂಲಕ ಬಿಜೆಪಿ ಸರಕಾರ ರಚನೆ ಖಚಿತ ಎಂಬ ಸಂದೇಶವನ್ನು  ಜೆ.ಸಿ.ಮಾಧುಸ್ವಾಮಿ ರವಾನಿಸಿದ್ದಾರೆ.

ರವಿವಾರ ನಗರದ ಡಾಲೋರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸದ ಬಳಿ ಮಾತನಾಡಿದ ಅವರು, ವಿಶ್ವಾಸಮತ ಕೇಳುತ್ತೇನೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಕಲಾಪ ಸಲಹಾ ಸಮಿತಿ ಸಭೆ ನಡೆಸಿ ಪ್ರತಿಪಕ್ಷ ನಾಯಕರ ಸಲಹೆ ಪಡೆದು ವಿಶ್ವಾಸಮತ ಯಾಚನೆ ಮಾಡುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಸಭಾಧ್ಯಕ್ಷ ರಮೇಶ್ ಕುಮಾರ್ ಕೂಡಲೇ ವಿಶ್ವಾಸಮತಯಾಚನೆಗೆ ದಿನಾಂಕ ಹಾಗೂ ಕಾಲ ನಿಗದಿಪಡಿಸಿ ಇದಕ್ಕೆಲ್ಲಾ ಇತಿಶ್ರೀ ಹಾಡುತ್ತಾರೆ ಎನ್ನುವ ಭಾವನೆಯಲ್ಲಿ ನಾವೆಲ್ಲಾ ಇದ್ದೇವೆ ಎಂದು ಮಾಧುಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News