ಮುಖ್ಯಮಂತ್ರಿ ವಿಶ್ವಾಸ ಮತಯಾಚನೆ ಹೇಳಿಕೆ ಕೇವಲ ಬೂಟಾಟಿಕೆ: ಶೋಭಾ ವಾಗ್ದಾಳಿ
Update: 2019-07-14 17:19 GMT
ಬೆಂಗಳೂರು, ಜು.14: ಮೈತ್ರಿ ಸರಕಾರದಲ್ಲಿರುವ ಶಾಸಕರ ನಡುವೆಯೇ ವಿಶ್ವಾಸವಿಲ್ಲದಿರುವಾಗ ಮುಖ್ಯಮಂತ್ರಿ ವಿಶ್ವಾಸ ಮತಯಾಚನೆ ಹೇಳಿಕೆ ಕೇವಲ ಬೂಟಾಟಿಕೆಯಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ರವಿವಾರ ನಗರದ ಡಾಲೋರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸದ ಬಳಿ ತೆರಳಿ ಚರ್ಚೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ವಿಶ್ವಾಸ ಮತಯಾಚನೆ ಮಾಡುತ್ತೇನೆ ಅಂತ ಹೇಳಿದ್ದಾರೆ, ವಿಶ್ವಾಸ ಮತ ಯಾಚನೆ ಮಾಡಲು ಅವರ ಬಳಿ ಶಾಸಕರ ಸಂಖ್ಯೆ ಇಲ್ಲ. ಶಾಸಕರಿಗೇನೆ ವಿಶ್ವಾಸವಿಲ್ಲ. ಇನ್ನಾವ ರೀತಿ ಅವರು ಬಹುಮತ ಸಾಬೀತು ಪಡಿಸುತ್ತಾರೆ ಎಂದು ಟೀಕಿಸಿದರು.