'ದ್ವಾರಕೀಶ್ ನಿಧನ' ಪೋಸ್ಟ್: ಬಿಜೆಪಿ ಶಾಸಕ ರೇಣುಕಾಚಾರ್ಯ ವಿರುದ್ಧ ಆಕ್ರೋಶ

Update: 2019-07-16 17:32 GMT

ಬೆಂಗಳೂರು, ಜು.16: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ಅವರು ನಿಧನರಾಗಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಸುದ್ದಿ ಪ್ರಕಟಿಸಿದ್ದಾರೆ ಎನ್ನಲಾದ ಫೋಟೋ ವೈರಲ್ ಆಗಿದ್ದು, ಹಲವರು ಇದರ ವಿರುದ್ಧ ಹರಿಹಾಯ್ದಿದ್ದಾರೆ.

ಸೋಮವಾರ ತಮ್ಮ ಫೇಸ್‌ಬುಕ್ ಪುಟದಿಂದ, ಹಾಸ್ಯ ನಟ ನಿರ್ಮಾಪಕ ನಿರ್ದೇಶಕ ಕರ್ನಾಟಕ ಪ್ರಿಯ ನಮ್ಮ ನಿಮ್ಮೆಲ್ಲರ ದ್ವಾರಕೀಶ್ ಅವರು ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಬಳಿಕ, ಇದು ಸುಳ್ಳು ಸುದ್ದಿ ತಿಳಿದು, ಪೋಸ್ಟ್ ಅಳಿಸಲಾಯಿತು.

ಆದರೆ, ರೇಣುಕಾಚಾರ್ಯ ಅವರ ಪೋಸ್ಟ್‌ಗೆ ಮಂದಿ ಆಕ್ರೋಶ ವ್ಯಕ್ತಪಡಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರು, ಜನಪ್ರತಿನಿಧಿಗಳಾದ ನೀವು ಒಮ್ಮೆ ಸುದ್ದಿಗಳ ಸತ್ಯಾಸತ್ಯತೆ ತಿಳಿದುಕೊಳ್ಳಿ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News