ಶಾಸಕರ ರಾಜೀನಾಮೆ ಇತ್ಯರ್ಥಪಡಿಸದೇ ವಿಶ್ವಾಸ ಮತಯಾಚಿಸುವುದು ಸರಿಯಲ್ಲ: ಕೃಷ್ಣ ಭೈರೇಗೌಡ
Update: 2019-07-18 08:53 GMT
ಬೆಂಗಳೂರು, ಜು.18: "ವಿಶ್ವಾಸಮತ ಸರಕಾರದ ಭವಿಷ್ಯ ನಿರ್ಧರಿಸುತ್ತದೆ. ಸದನಕ್ಕೆ ಗೈರಾಗಿರುವ ಶಾಸಕರು ಈ ಸದನದ ಸದಸ್ಯರೋ, ಅಲ್ಲವೋ ಎಂಬುದನ್ನು ನಿರ್ಧರಿಸದೇ, ರಾಜೀನಾಮೆ ಇತ್ಯರ್ಥವಾಗದೇ,ವಿಶ್ವಾಸ ಮತ ಯಾಚಿಸುವುದು ಸರಿಯಲ್ಲ. ವಿಶ್ವಾಸ ಮತಕ್ಕೂ ಮೊದಲು ರಾಜೀನಾಮೆ ಇತ್ಯರ್ಥವಾಗಬೇಕು. ಸಭಾಧ್ಯಕ್ಷರೇ ರಾಜೀನಾಮೆ ನಿರ್ಧಾರ ಕೈಗೊಳ್ಳಬೇಕಾಗಿದೆ’’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಕ್ರಿಯಾಲೋಪದ ಮೇಲೆ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.