ಕಲಾಪಕ್ಕೆ ಬಂದ ರಾಮಲಿಂಗಾರೆಡ್ಡಿ
Update: 2019-07-18 15:15 GMT
ಬೆಂಗಳೂರು, ಜು. 18: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಟಿಎಂ ಲೇಔಟ್ ಕ್ಷೇತ್ರದ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರು ವಿಧಾನಸಭೆ ಕಲಾಪಕ್ಕೆ ಹಾಜರಾದರು.
ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಪ್ರಸ್ತಾವ ಚರ್ಚೆ ವೇಳೆ ಸದನದಲ್ಲಿ ಹಾಜರಿದ್ದು ಕುತೂಹಲ ಮೂಡಿಸಿದರು. ಅಲ್ಲದೆ, ಬೆಳಗ್ಗೆ 11ಗಂಟೆಯಿಂದ ಸದನದಲ್ಲಿ ಹಾಜರಿದ್ದು ಗಂಭೀರವಾಗಿ ಎಲ್ಲರ ಮಾತುಗಳನ್ನು ಆಲಿಸಿದರು.