ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ ಶಾಸಕರಿಗೆ ಊಟ ಏರ್ಪಾಡು ಮಾಡಿದ್ದು ಪರಮೇಶ್ವರ್!

Update: 2019-07-19 12:11 GMT
Photo: aninews.in

ಬೆಂಗಳೂರು, ಜು.19: ರಾಜ್ಯದಲ್ಲಿನ ರಾಜಕೀಯ ಬಿಕ್ಕಟ್ಟಿನ ನಡುವೆ ಗುರುವಾರ ವಿಶ್ವಾಸಮತ ಯಾಚನೆ ನಡೆಯದೇ ಇರುವುದನ್ನು ವಿರೋಧಿಸಿ ರಾತ್ರಿಯಿಡೀ ವಿಧಾನಸೌಧದಲ್ಲಿ ಪ್ರತಿಭಟಿಸಿದ ಬಿಜೆಪಿ ಶಾಸಕ ಮಿತ್ರರನ್ನು ಭೇಟಿಯಾದ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಶಾಸಕರಿಗೆ ಆಹಾರದ ಏರ್ಪಾಟನ್ನೂ ಮಾಡಿದ್ದರು.

“ಅವರು ಅಹೋರಾತ್ರಿ ಪ್ರತಿಭಟನೆಯನ್ನು ವಿಧಾನಸೌಧದಲ್ಲಿ ನಡೆಸುತ್ತಿದ್ದರು. ಅವರಿಗೆ ಆಹಾರ ಮತ್ತಿತರ ಏರ್ಪಾಟುಗಳನ್ನು ಮಾಡುವುದು ನಮ್ಮ ಕರ್ತವ್ಯ. ಅವರಲ್ಲಿ ಕೆಲವರಿಗೆ ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆಯಿದೆ. ಆದುದರಿಂದ ಅವರಿಗೆ ಎಲ್ಲಾ ಏರ್ಪಾಟು ಮಾಡಿದ್ದೇವೆ. ರಾಜಕೀಯದಾಚೆ ನಾವೆಲ್ಲರೂ  ಸ್ನೇಹಿತರು. ಇದು ಪ್ರಜಾಪ್ರಭುತ್ವದ ಸೊಬಗು” ಎಂದು ಪರಮೇಶ್ವರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News