ರಾಜೀನಾಮೆ ಪತ್ರದೊಂದಿಗೇ ಸದನಕ್ಕೆ ಬಂದ ಸ್ಪೀಕರ್ ರಮೇಶ್ ಕುಮಾರ್ !

Update: 2019-07-23 13:10 GMT

ಬೆಂಗಳೂರು, ಜು.23: ಇಂದಿನ ಕಲಾಪಕ್ಕೆ ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ಪತ್ರದೊಂದಿಗೇ ಬಂದಿದ್ದು, ಸದನದಲ್ಲಿ ಪ್ರದರ್ಶಿಸಿ ಯಾವ ಕ್ಷಣದಲ್ಲಾದರೂ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.

ಬೆಳಗ್ಗಿನಿಂದ ಏನಾಗುತ್ತೋ ಅಂತ ರಾಜೀನಾಮೆ ಪತ್ರದೊಂದಿಗೆ ಬಂದಿದ್ದು, ಈಗಲೂ ಪತ್ರ ಜೇಬಿನಲ್ಲೇ ಇದೆ. ಯಾವ ಕ್ಷಣದಲ್ಲಾದರೂ ರಾಜೀನಾಮೆ ಸಲ್ಲಿಸಲು ರೆಡಿ ಇದ್ದೇನೆ ಎಂದು ಪತ್ರವನ್ನು ಪ್ರದರ್ಶಿಸಿ, ಯಡಿಯೂರಪ್ಪರಿಗೆ ಕೊಟ್ಟು ಓದುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News