ಕಳವು ಪ್ರಕರಣ: ಇಬ್ಬರ ಬಂಧನ, 21 ಬೈಕ್ ಗಳು ಜಪ್ತಿ

Update: 2019-07-24 17:28 GMT

ಬೆಂಗಳೂರು, ಜು.24: ಬೈಕ್ ಕಳ್ಳತನ ಪ್ರಕರಣಯೊಂದನ್ನು ಬೇಧಿಸಿರುವ ಯಲಹಂಕ ಉಪನಗರ ಠಾಣಾ ಪೊಲೀಸರು, ಇಬ್ಬರನ್ನು ಬಂಧಿಸಿ, 21 ಬೈಕ್‌ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವಿದ್ಯಾರಣ್ಯಪುರದ ನರಸೀಪುರ ಲೇಔಟ್‌ನ ದರ್ಶನ್(19) ಹಾಗೂ ಬಾಲಾಜಿ ಲೇಔಟ್ ನಿವಾಸಿ ಲಕ್ಷ್ಮಣ (20) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲಸ ನಿರ್ಮಾಣ ಕೆಲಸ ಮಾಡುತ್ತಿದ್ದ ಲಕ್ಷ್ಮಣ, ವಿದ್ಯಾರಣ್ಯಪುರದಲ್ಲಿ ಹಿಂದೆ ಬೈಕ್ ಕಳವು ಮಾಡಿ ಜೈಲಿಗೆ ಹೋಗಿ 3 ತಿಂಗಳ ಹಿಂದಷ್ಟೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಬಾಲಾಜಿ ಲೇಔಟ್‌ನ ತನ್ನ ಮನೆಯ ಬಳಿಯೇ ವಾಸಿಸುತ್ತಿದ್ದ ಮತ್ತೊಬ್ಬ ಆರೋಪಿ ದರ್ಶನ್‌ನನ್ನು ಪರಿಚಯ ಮಾಡಿಕೊಂಡು ಬೈಕ್ ಕಳವು ಕೃತ್ಯಕ್ಕೆ ಮುಂದಾಗಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಯಲಹಂಕ ರಸ್ತೆಯಲ್ಲಿ ಉಪನಗರದ ಶ್ಯಾಮರಾಜಪುರ ಅನುಮಾನಾಸ್ಪದವಾಗಿ ಬೈಕ್‌ನಲ್ಲಿ ಹೋಗುತ್ತಿದ್ದ ಇವರಿಬ್ಬರನ್ನು ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತವರ ಸಿಬ್ಬಂದಿ ತಂಡ, ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳ ಬಂಧನದಿಂದ ಚೆನ್ನಮ್ಮನಕೆರೆ ಅಚ್ಚುಕಟ್ಟು, ಎಚ್‌ಎಎಲ್, ಬಿಡದಿ, ಆರ್‌ಟಿ ನಗರ ಠಾಣೆಯ ತಲಾ ಒಂದು ದ್ವಿಚಕ್ರ ವಾಹನಗಳವು ಪ್ರಕರಣಗಳು ಪತ್ತೆಯಾಗಿದ್ದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News