ಎಂಎಂವೈಸಿ ವತಿಯಿಂದ ಆ.2ರಂದು ರಕ್ತದಾನ ಶಿಬಿರ

Update: 2019-08-01 17:20 GMT

ಬೆಂಗಳೂರು, ಆ.1: ಬೆಂಗಳೂರಿನ ಮಂಗಳೂರು ಮುಸ್ಲಿಮ್ ಯೂತ್ ಕೌನ್ಸಿಲ್(ಎಂಎಂವೈಸಿ), ಕರ್ನಾಟಕ ರೆಡ್ ಕ್ರಾಸ್ ರಕ್ತ ನಿಧಿ, ಲೈಫ್ ಆಫ್ ಹೋಪ್, ಸೇವಾದಳ ಯಂಗ್ ಬ್ರಿಗೇಡ್ ಸಹಯೋಗದೊಂದಿಗೆ ಆ.2ರಂದು ಜಯನಗರ 4ನೇ ಬ್ಲಾಕ್‌ನಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದ ಸಮೀಪವಿರುವ ಈದ್ಗಾ ಮಸ್ಜಿದ್‌ನಲ್ಲಿ ಬೆಳಗ್ಗೆ 10 ಗಂಟೆಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ರಕ್ತದಾನ ಶಿಬಿರವನ್ನು ಶಾಸಕಿ ಸೌಮ್ಯಾ ರೆಡ್ಡಿ ಉದ್ಘಾಟಿಸಲಿದ್ದು, ಗೌರವಾನ್ವಿತ ಅತಿಥಿಗಳಾಗಿ ಪಾಲಿಕೆ ಸದಸ್ಯ ಎನ್.ನಾಗರಾಜ್, ಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಂಜೇಗೌಡ, ಸೇವಾದಳದ ಮುಖ್ಯ ಆಯೋಜಕ ಎಸ್.ಪ್ಯಾರಿಜಾನ್, ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ.ಇ.ಶಿಲ್ಪಾ, ಈದ್ಗಾ ಮಸ್ಜಿದ್ ಅಧ್ಯಕ್ಷ ನಯೀಮ್ ದುರ್ರಾನಿ ಹಾಗೂ ಉಬೇದುಲ್ಲಾ ಖಾನ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News