ರಾಜಕೀಯ ಒತ್ತಡಕ್ಕೆ ಹೆದರದ ರವೀಶ್ ಕುಮಾರ್: ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತನಿಗೆ ಸಿದ್ದರಾಮಯ್ಯ ಅಭಿನಂದನೆ

Update: 2019-08-02 14:53 GMT

ಬೆಂಗಳೂರು, ಆ. 2: ಪತ್ರಕರ್ತ ರವೀಶ್‌ ಕುಮಾರ್ ಅವರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಘೋಷಿಸಲಾಗಿದ್ದು, ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ.

ರವೀಶ್ ಕುಮಾರ್ ರಾಜಕೀಯ ಒತ್ತಡಕ್ಕೆ ಹೆದರಿಲ್ಲ. ಅಧಿಕಾರದಲ್ಲಿರುವವರ ವಿರುದ್ಧ ಹೋರಾಡಿದ್ದು, ಇದರಿಂದ ಅನೇಕರಿಗೆ ಧ್ವನಿಯಾಗಿದ್ದಾರೆ. ಎನ್‌ಡಿಟಿವಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದು, ಅಪಾರ ಜನಮೆಚ್ಚುಗೆ ಪಡೆಯುವುದರ ಮೂಲಕ ಸಾಮಾಜಿಕ ಸಮಸ್ಯೆಗಳು-ಪ್ರಚಲಿತ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಅಭಿನಂದಿನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News