ಐಎಂಎ ವಂಚನೆ ಪ್ರಕರಣ: ಕೊನೆಗೂ ಮನ್ಸೂರ್ ಸಿಟ್ ವಶಕ್ಕೆ

Update: 2019-08-03 16:27 GMT

ಬೆಂಗಳೂರು, ಆ.3: ಐಎಂಎ ವಂಚನೆ ಪ್ರಕರಣದ ಪ್ರಮುಖ ರೂವಾರಿ ಮನ್ಸೂರ್ ಖಾನ್​ನನ್ನು​ ಆ.16ರವರೆಗೂ ಸಿಟ್ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.

ಶನಿವಾರ ನಗರದ ಒಂದನೇ ಸಿಟಿ ಸಿವಿಲ್ ಕೋರ್ಟ್​ ಆ.16ರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಇಂದಿನಿಂದ 14 ದಿನ ಮನ್ಸೂರ್​ ಖಾನ್​ನನ್ನು ಸಿಟ್ ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆ ನಡೆಸಲಿದೆ.

ಆರೋಪಿ ಮನ್ಸೂರ್​​ ಖಾನ್​ನನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶ ಶಿವಶಂಕರ್ ಬಿ. ಅಮರಣ್ಣನವರ್ ಮುಂದೆ ಸಿಟ್ ಮನವಿ ಮಾಡಿದ ಹಿನ್ನೆಲೆ, ನ್ಯಾಯಾಧೀಶರು ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News