ಬಳ್ಳಾರಿ ಟಸ್ಕರ್ಸ್ಗೆ 9 ರನ್‌ಗಳ ರೋಚಕ ಜಯ

Update: 2019-08-19 19:10 GMT

ಬೆಂಗಳೂರು, ಆ.19: ದೇವ್‌ದತ್ ಪಡಿಕ್ಕಲ್ ದಾಖಲಿಸಿದ ಆಕರ್ಷಕ 70 ರನ್‌ಗಳ ನೆರವಿನಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ ಇಲ್ಲಿ ಸೋಮವಾರ ನಡೆದ ಕೆಪಿಎಲ್ ಟ್ವೆಂಟಿ-20 ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 9 ರನ್‌ಗಳ ರೋಚಕ ಜಯ ಗಳಿಸಿದೆ.

  ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 164 ರನ್‌ಗಳ ಸವಾಲನ್ನು ಪಡೆದ ಹುಬ್ಬಳ್ಳಿ ಟೈಗರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 154 ರನ್ ಗಳಿಸಿತು. ಅಬ್ರಾರ್ ಖಾಝಿ 17 ರನ್‌ಗಳಿಗೆ ಹುಬ್ಬಳ್ಳಿ ತಂಡದ ಎರಡು ಪ್ರಮುಖ ವಿಕೆಟ್‌ಗಳನ್ನು ಉಡಾಯಿಸಿ ಬಳ್ಳಾರಿ ತಂಡದ ಗೆಲುವಿಗೆ ನೆರವಾದರು.

 ಇದರೊಂದಿಗೆ ಬಳ್ಳಾರಿ ಆಡಿರುವ ಎರಡು ಪಂದ್ಯಗಳಲ್ಲೂ ಜಯ ಗಳಿಸಿದೆ. ಆದರೆ ಹುಬ್ಬಳ್ಳಿ ಸತತ ಎರಡನೇ ಸೋಲು ಅನುಭವಿಸಿದೆ. ಹುಬ್ಬಳ್ಳಿ ತಂಡದ ಎಂ. ವಿಶ್ವನಾಥನ್ 30ರನ್, ವಿನಯ ಕುಮಾರ್ 37ರನ್, ಪ್ರವೀಣ್ ದುಬೆ 28ರನ್ ಗಳಿಸಿದರು. ಇದಕ್ಕೂ ಮೊದಲು ಬಳ್ಳಾರಿ ಟಸ್ಕರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 163 ರನ್ ಗಳಿಸಿತ್ತು.

    ದೇವ್‌ದತ್ ಪಡಿಕ್ಕಲ್ ತನ್ನ ಅಪೂರ್ವ ಫಾರ್ಮ್‌ನ್ನು ಮುಂದುವರಿಸಿ 56 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ 70 ರನ್ ಗಳಿಸಿದರು. ಕೇರಳದ 19ರ ಹರೆಯದ ಪಡಿಕ್ಕಲ್ ಮೊದಲ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಅರ್ಧಶತಕ(54) ದಾಖಲಿಸಿದ್ದರು. ಕಳೆದ ಆವೃತ್ತಿಯ ರಣಜಿಯಲ್ಲಿ ಚೊಚ್ಚಲ ಪಂದ್ಯವನ್ನಾಡಿ 5 ಪಂದ್ಯಗಳಲ್ಲಿ ಮೂರು ಬಾರಿ 70ಕ್ಕೂ ಅಧಿಕ ರನ್ ದಾಖಲಿಸಿ ಗಮನ ಸೆಳೆದಿದ್ದ ಪಡಿಕ್ಕಲ್ ಅವರು ಇಂದು ಅಭಿಷೇಕ್ ರೆಡ್ಡಿ ಜೊತೆ ಎರಡನೇ ವಿಕೆಟ್‌ಗೆ 59 ರನ್‌ಗಳ ಜೊತೆಯಾಟ ನೀಡಿದರು.

ಸಂಕ್ಷಿಪ್ತ ಸ್ಕೋರ್

►ಬಳ್ಳಾರಿ ಟಸ್ಕರ್ಸ್ 20 ಓವರ್‌ಗಳಲ್ಲಿ 163/8 (ಪಡಿಕ್ಕಲ್ 70, ಝೀಶನ್ ಅಲಿ 25; ಮಿತ್ರಕಾಂತ್ ಯಾದವ್ 6ಕ್ಕೆ 2, ಆದಿತ್ಯ ಸೋಮಣ್ಣ 28ಕ್ಕೆ 2, ಡೇವಿಡ್ ಮಥಾಯಿಸ್ 35ಕ್ಕೆ 2)

►ಹುಬ್ಬಳ್ಳಿ ಟೈಗರ್ಸ್ 20 ಓವರ್‌ಗಳಲ್ಲಿ 154/9 (ಎಂ. ವಿಶ್ವನಾಥನ್ 30, ವಿನಯ ಕುಮಾರ್ 37, ಪ್ರವೀಣ್ ದುಬೆ 28; ಅಬ್ರಾರ್ ಖಾಝಿ 17ಕ್ಕೆ 2, ಸಿ.ಎ ಕಾರ್ತಿಕ್ 19ಕ್ಕೆ 3).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News