ಉತ್ತರಾಖಂಡ: ಪ್ರವಾಹ ಪರಿಹಾರ ಕಾರ್ಯದಲ್ಲಿ ನಿರತ ಹೆಲಿಕಾಪ್ಟರ್ ಪತನ

Update: 2019-08-21 08:15 GMT

ಡೆಹ್ರಾಡೂನ್, ಆ.21: ಪ್ರವಾಹದಿಂದ ತತ್ತರಿಸಿರುವ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ನಿರತವಾಗಿದ್ದ ಹೆಲಿಕಾಪ್ಟರ್‌ವೊಂದು ಪತನಗೊಂಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಮೂವರ ಸ್ಥಿತಿಗತಿ ಬಗ್ಗೆ ಇನ್ನೂ ಮಾಹಿತಿ ಲಭಿಸಿಲ್ಲ.

ಭಾರೀಮಳೆಯಿಂದ ಬಾಧಿತವಾಗಿರುವ ಜನರಿಗೆ ಆಹಾರವನ್ನು ಪೂರೈಸಿ ವಾಪಸ್ ಬರುತ್ತಿದ್ದ ವೇಳೆ ಹೆಲಿಕಾಪ್ಟರ್‌ವೊಂದು ಮೊಲ್ಡಿ ಬಳಿ ಪತನಗೊಂಡಿದೆ ಎಂದು ಉತ್ತರಕಾಶಿ ವಿಪತ್ತು ನಿರ್ವಹಣಾಧಿಕಾರಿ ದೇವೇಂದ್ರ ಪಾಟ್ವಾಲ್ ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

‘‘ಪ್ರಾಥಮಿಕ ವರದಿಯ ಪ್ರಕಾರ, ಹೆಲಿಕಾಪ್ಟರ್ ಪತನ ಹೆಚ್ಚು ಎತ್ತರದಲ್ಲಿ ನಡೆದಿಲ್ಲ. ಹೀಗಾಗಿ ವಿಮಾನದಲ್ಲಿದ್ದವರು ಸುರಕ್ಷಿತವಾಗಿರುವ ಸಾಧ್ಯತೆಯಿದೆ’’ ಎಂದು ದೇವೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News