ಗಮನ ಬೇರೆಡೆ ಸೆಳೆದು 5 ಲಕ್ಷ ರೂ. ದೋಚಿದ ದರೋಡೆಕೋರರು

Update: 2019-08-27 17:29 GMT

ಬೆಂಗಳೂರು, ಆ.27: ವ್ಯಕ್ತಿಯೊಬ್ಬರಿಂದ ದುಷ್ಕರ್ಮಿಗಳು 5 ಲಕ್ಷ ರೂ. ದೋಚಿ ಪರಾರಿಯಾಗಿರುವ ಪ್ರಕರಣ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂಜೀವ್ ಹಣ ಕಳೆದುಕೊಂಡವರು ಎಂದು ತಿಳಿದುಬಂದಿದೆ.

ಸಂಜೀವ್ ಆ.23ರಂದು ಮಹದೇವಪುರದ ಎಸ್‌ಬಿಐ ಬ್ಯಾಂಕ್‌ನಿಂದ 5 ಲಕ್ಷ ರೂ. ಪಡೆದು, ಬ್ಯಾಂಕ್‌ನಿಂದ ಹೊರಗಡೆ ಬಂದು ತನ್ನ ದ್ವಿಚಕ್ರ ವಾಹನದ ಮೇಲೆ ಹಣದ ಚೀಲ ಇಟ್ಟಿದ್ದ ವೇಳೆ ಅಪರಿಚಿತರು ನಿಮ್ಮ ನೋಟು ಬಿದ್ದಿದೆ ತೆಗೆದುಕೊಳ್ಳಿ ಎಂದು ಸಂಜೀವ್ ಅವರ ಗಮನ ಬೇರೆಡೆ ಸೆಳೆದು ಹಣ ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News