ಮಾಯಾವತಿ ವಿದ್ಯುತ್ ತಂತಿ, ಅವರನ್ನು ಸ್ಪರ್ಶಿಸಿದವರು ಸಾಯುತ್ತಾರೆ ಎಂದ ಉ. ಪ್ರದೇಶ ಸಚಿವ!

Update: 2019-08-29 14:20 GMT

ಆಗ್ರಾ,ಆ.29: ಉತ್ತರ ಪ್ರದೇಶ ಸಂಪುಟಕ್ಕೆ ಇತ್ತೀಚಿಗೆ ಸೇರ್ಪಡೆಗೊಂಡಿರುವ ಸಚಿವ ಗಿರಿರಾಜ್ ಸಿಂಗ್ ಧರ್ಮೇಶ್ ಅವರು,ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರನ್ನು ಸಜೀವ ವಿದ್ಯುತ್ ತಂತಿಗೆ ಹೋಲಿಸಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಈ ಹೋಲಿಕೆಯನ್ನು ಮಾಡಿದ ಧರ್ಮೇಶ್, ಮಾಯಾವತಿಯವರನ್ನು ಸ್ಪರ್ಶಿಸಿದವರು ಸಾಯುತ್ತಾರೆ ಎಂದರು.

ಮಾಯಾವತಿ ವಿಶ್ವಾಸಯೋಗ್ಯರಲ್ಲ ಮತ್ತು ಅವರು ಪ್ರತಿಯೊಬ್ಬರನ್ನೂ ವಂಚಿಸಿದ್ದಾರೆ. ಅವರು ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಬಳಸಿಕೊಂಡು ತನ್ನ ಪಕ್ಷದ ಸಂಸದರ ಬಲವನ್ನು 10ಕ್ಕೆ ಹೆಚ್ಚಿಸಿಕೊಂಡಿದ್ದರು ಮತ್ತು ನಂತರ ಆ ಪಕ್ಷಕ್ಕೆ ಕೈಕೊಟ್ಟಿದ್ದಾರೆ ಎಂದು ಅವರು ಟೀಕಿಸಿದರು.

1995ರಲ್ಲಿ ಎಸ್‌ಪಿ ಕಾರ್ಯಕರ್ತರು ಮಾಯಾವತಿ ಅವರನ್ನು ಒತ್ತೆಯಾಳಾಗಿರಿಸಿಕೊಂಡು ಅವರ ಮೇಲೆ ಹಲ್ಲೆ ನಡೆಸಿದ್ದ ಗೆಸ್ಟ್ ಹೌಸ್ ಪ್ರಕರಣದಲ್ಲಿ ಬಿಜೆಪಿ ನಾಯಕ ಬ್ರಹ್ಮದತ್ತ ತ್ರಿವೇದಿ ಅವರ ಪ್ರಾಣವನ್ನು ರಕ್ಷಿಸಿದ್ದರು ಎಂದು ಸಮಾಜ ಕಲ್ಯಾಣ,ಎಸ್‌ಸಿ/ಎಸ್‌ಟಿ ಕಲ್ಯಾಣ ಸಚಿವರಾಗಿರುವ ಧರ್ಮೇಶ ತಿಳಿಸಿದರು.

ಬಿಎಸ್‌ಪಿ ಸ್ಥಾಪಕ ಕಾನ್ಶಿರಾಂ ಅವರು ನಿಗೂಢ ಸನ್ನಿವೇಶದಲ್ಲಿ ಮೃತಪಟ್ಟಿದ್ದರು ಎಂದು ಆರೋಪಿಸಿದ ಅವರು,ಈ ವಿಷಯದಲ್ಲಿ ಸಿಬಿಐ ತನಿಖೆ ನಡೆಸುವಂತೆ ತಾನು ಮುಖ್ಯಮಂತ್ರಿ ಆದಿತ್ಯನಾಥ ಅವರನ್ನು ಕೋರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News