ಸಿಎಂ ಪರಿಹಾರ ನಿಧಿಗೆ ಕನ್ನಡ ಸಾಹಿತ್ಯ ಪರಿಷತ್‌ ನಿಂದ 34 ಲಕ್ಷ ರೂ. ದೇಣಿಗೆ

Update: 2019-09-04 16:39 GMT

ಬೆಂಗಳೂರು, ಸೆ.4: ಜಲಪ್ರಳಯದಿಂದ ರಾಜ್ಯದೆಲ್ಲೆಡೆ ಅಪಾರ ನಷ್ಟವುಂಟಾಗಿದ್ದು, ನೆರೆಸಂತ್ರಸ್ತರ ಸಹಾಯಾರ್ಥವಾಗಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 34 ಲಕ್ಷ ರೂ.ವನ್ನು ದೇಣಿಗೆ ನೀಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್‌ನ ಸಿಬ್ಬಂದಿಗಳ ಒಂದು ದಿನದ ವೇತನ, ಜಿಲ್ಲಾ ಕಸಾಪ ಘಟಕಗಳ ಅಧ್ಯಕ್ಷರು, ಕಸಾಪ ಅಧ್ಯಕ್ಷರು, ಪದಾಧಿಕಾರಿಗಳಿಂದ ದೇಣಿಗೆ ರೂಪದಲ್ಲಿ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 34 ಲಕ್ಷ ರೂ.ಗಳ ಚೆಕ್‌ನ್ನು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಹಸ್ತಾಂತರಿಸಿದರು.

ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಗೌರವ ಕಾರ್ಯದರ್ಶಿ ರಾಜಶೇಖರ ಹತಗುಂದಿ, ಜಿಲ್ಲಾ ಕಸಾಪ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಲಿಂಗಯ್ಯ ಹಿರೇಮಠ, ಶ್ರೀಶೈಲ ಕರಿಶಂಕರಿ, ಬಿ.ಎಸ್.ವಿನಯ್, ಸಿದ್ದಪ್ಪಹೊಟ್ಟಿ, ರಾಜಶೇಖರ ಅಂಗಡಿ, ಸುರೇಶ ಚನಶೆಟ್ಟಿ, ಶರಣು ಗೋಗೇರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News