ಹುಸಿ ಬಾಂಬ್ ಕರೆ: ಆರೋಪಿ ಬಂಧನ

Update: 2019-09-05 17:31 GMT

ಬೆಂಗಳೂರು, ಸೆ.5: ರಾಜಧಾನಿ ಬೆಂಗಳೂರಿಗೆ ಉಗ್ರಗಾಮಿಗಳು ಬಂದಿದ್ದು, ಚೀಲದಲ್ಲಿ ಬಾಂಬ್‌ಗಳಿವೆ ಎಂದು ಹುಸಿ ಬಾಂಬ್ ಕರೆ ಮಾಡಿದ ಆರೋಪಿಯೋರ್ವನನ್ನು ಜೀವನ್‌ ಭೀಮಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿ ಗಣೇಶ್(34) ಎಂಬಾತ ಬಂಧಿತ ಆರೋಪಿಯಾಗಿದ್ದು, ಈ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಉಗ್ರಗಾಮಿಗಳು ಇಲ್ಲಿನ ಜೀವನ್‌ಭೀಮಾನಗರ ಮುರುಗೇಶ್ ಪಾಳ್ಯದಲ್ಲಿರುವ ರಾಜರಾಜೇಶ್ವರಿ ಚಿತ್ರಮಂದಿರದ ಬಳಿ ಬಂದಿದ್ದಾರೆಂದು ಆರೋಪಿ ಗಣೇಶ್, ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಕಾರ್ಯಾಚರಣೆ ನಡೆಸಿದ ಪೊಲೀಸರು ಗಣೇಶ್‌ನನ್ನು ಹುಸಿ ಬಾಂಬ್ ಕರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News