ಜೂಜಾಟ: ಐವರ ಬಂಧನ, 1.78 ಲಕ್ಷ ರೂ. ನಗದು ಜಪ್ತಿ

Update: 2019-09-05 17:46 GMT

ಬೆಂಗಳೂರು, ಸೆ.5: ಹಣ ಪಣವಾಗಿ ಕಟ್ಟಿಕೊಂಡು ಜೂಜಾಟ ನಡೆಸುತ್ತಿದ್ದ ಆರೋಪದಡಿ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜಯನಗರ ನಿವಾಸಿಗಳಾದ ಅಕ್ಬರ್, ಅಹ್ಮದ್ ಶರೀಪ್, ಸೆಂದಿಲ್, ಮೆಹಬೂಬ್ ಹಾಗೂ ಸಲೀಂ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ 1.78 ಲಕ್ಷ ರೂ. ನಗದು, 3 ಮೊಬೈಲ್, 27 ಮಟ್ಕಾ ಚೀಟಿಗಳನ್ನು ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News