ಉತ್ತರ ಪ್ರದೇಶದಲ್ಲಿ ಬ್ಯಾಂಕ್ ನಿಂದ 15 ಲಕ್ಷ ರೂ. ದೋಚಿದ ದುಷ್ಕರ್ಮಿಗಳು

Update: 2019-09-10 04:04 GMT

ಬಾಗಪತ್, ಸೆ.10: ಮೂವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಬ್ಯಾಂಕ್ ಗೆ ನುಗ್ಗಿ 15 ಲಕ್ಷ ರೂ.  ದೋಚಿರುವ ಘಟನೆ ಉತ್ತರ ಪ್ರದೇಶದ ಗವಾನ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಮುಖವನ್ನು ಮುಚ್ಚಿಕೊಂಡಿದ್ದ  ಮೂವರು ದುಷ್ಕರ್ಮಿಗಳು ಸಿಂಡಿಕೇಟ್ ಬ್ಯಾಂಕ್ ಶಾಖೆಗೆ ನುಗ್ಗಿ ನಗದು ಕೌಂಟರ್ನಿಂದ 9 ಲಕ್ಷ ರೂ. ಮತ್ತು ಅಲ್ಮರಾದಿಂದ 6 ಲಕ್ಷ ರೂ.ದೋಚಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್ ನ ವ್ಯವಸ್ಥಾಪಕ ಹರ್ವೇಂದ್ರ ಸಿಂಗ್ ಅವರ ದೂರಿನ ಮೇರೆಗೆ ಮೂವರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಅವರನ್ನು ಬಂಧಿಸುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News