ಬಂಧನದಿಂದ ನ್ಯಾಯಾಲಯದ ಮಧ್ಯಂತರ ರಕ್ಷಣೆ ಪಡೆದ ಶೆಹ್ಲಾ ರಶೀದ್‌

Update: 2019-09-10 05:36 GMT

ಹೊಸದಿಲ್ಲಿ, ಸೆ.10: ಸಾಮಾಜಿಕ ಹೋರಾಟಗಾರ್ತಿ ಹಾಗೂ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಉಪಾಧ್ಯಕ್ಷೆ  ಶೆಹ್ಲಾ ರಶೀದ್‌ಗೆ ಪಟಿಯಾಲ ಹೌಸ್ ಕೋರ್ಟ್  ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.

 ತನ್ನ ವಿರುದ್ಧ ದೇಶದ್ರೋಹದ   ಪ್ರಕರಣದಲ್ಲಿ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಶೆಹ್ಲಾ ರಶೀದ್‌ ತಮ್ಮನ್ನು ಬಂಧಿಸುವುದನ್ನು ಪ್ರಶ್ನಿಸಿ ಮಧ್ಯಂತರ ರಕ್ಷಣೆ ಕೋರಿ  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಶೆಹ್ಲಾ ರಶೀದ್‌ ತನ್ನ ಟ್ವೀಟ್‌ಗಳ ಮೂಲಕ ಭಾರತೀಯ ಸೇನೆಯ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆಂದು  ಆರೋಪಿಸಿ ವಕೀಲರೊಬ್ಬರು ಸಲ್ಲಿಸಿದ್ದ ದೂರಿನ ಮೇರೆಗೆ ಅವರ ವಿರುದ್ಧ  ದಿಲ್ಲಿಯ ತಿಲಕ್ ಮಾರ್ಗ್  ಪೊಲೀಸ್ ಠಾಣೆಯಲ್ಲಿ  ಎಫ್‌ಐಆರ್ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News