ಸೆ.12: ‘ಸಮಕಾಲೀನ ತಲ್ಲಣಗಳು’ ರಾಷ್ಟ್ರೀಯ ವಿಚಾರ ಸಂಕಿರಣ
Update: 2019-09-11 17:32 GMT
ಬೆಂಗಳೂರು, ಸೆ. 11: ‘ಸಮಕಾಲೀನ ತಲ್ಲಣಗಳು’ ಎಂಬ ವಿಷಯದ ಕುರಿತು ನಾಳೆ(ಸೆ.12) ಬೆಳಗ್ಗೆ 11ಗಂಟೆಗೆ ನಗರದ ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.
‘ಸಮಾಜವಾದದ ದಳ್ಳುರಿ’ ಎಂಬ ವಿಷಯದ ಕುರಿತು ಲೇಖಕ ಪ್ರೊ.ರಾಮ ಪುನಿಯಾನಿ, ‘ಭಾರತ ಸಂವಿಧಾನ 370ನೆ ವಿಧಿ’ ಕುರಿತು ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಹಾಗೂ ‘ಭಾರತದ ಬಹುತ್ವಕ್ಕೆ ಎದುರಾಗಿರುವ ಸವಾಲುಗಳು’ ಬಗ್ಗೆ ಹಿರಿಯ ಸಾಹಿತಿ ಡಾ.ಎಂ.ಎಸ್.ಆಶಾದೇವಿ ಮಾತನಾಡಲಿದ್ದಾರೆ.