ಎಸ್ಪಿಪಿಯಾಗಿ ವಿ.ಎಂ.ಶೀಲವಂತ್ ನೇಮಕ
Update: 2019-09-12 17:14 GMT
ಬೆಂಗಳೂರು, ಸೆ.12: ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್(ಎಸ್ಪಿಪಿ) ಆಗಿ ವಕೀಲ ವಿಜಯಕುಮಾರ್ ಎಂ. ಶೀಲವಂತ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಆದೇಶವನ್ನು ರಾಜ್ಯ ಕಾನೂನು ಇಲಾಖೆ ಆದೇಶ ಹೊರಡಿಸಿದೆ. ಎಸ್ಪಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವಕೀಲ ಎಚ್.ಎಸ್.ಚಂದ್ರಮೌಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.