ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್‌ಗೆ ಆಚಾರ್ಯ ಪುರಸ್ಕಾರ

Update: 2019-09-14 16:51 GMT

ಬೆಂಗಳೂರು, ಸೆ.14: ಆಚಾರ್ಯ ತುಳಸಿ ಕರ್ತೃತ್ವ ರಾಷ್ಟ್ರೀಯ ಪುರಸ್ಕಾರಕ್ಕೆ ಮಾಜಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಭಾಜನರಾಗಿದ್ದಾರೆ ಎಂದು ಅಖಿಲ ಭಾರತೀಯ ತೇರಾಪಂಥ್ ಮಹಿಳಾ ಮಂಡಲದ ರಾಷ್ಟ್ರೀಯ ಅಧ್ಯಕ್ಷೆ ಕುಮುದ್ ಕಚ್ಚಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.16ರಂದು ಕುಂಬಳಗೋಡುವಿನ ಆಚಾರ್ಯ ತುಳಸಿ ಮಹಾಪ್ರಜ್ಞಾ ಚೇತನ ಸೇವಾ ಕೇಂದ್ರದಲ್ಲಿ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದ್ದು, ಸಮಾರಂಭದಲ್ಲಿ ಆಚಾರ್ಯ ಮಹಾಶ್ರವಣ್ ಜೀ ಪಾಲ್ಗೊಳ್ಳಲಿದ್ದಾರೆ. ಇನ್ನು ದೇಶದಾದ್ಯಂತ ಆಗಮಿಸಲಿರುವ 60 ಸಾವಿರಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಪುರಸ್ಕಾರ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಪ್ರತಿವರ್ಷ ಭಾರತೀಯ ಮಹಿಳಾ ಸಮುದಾಯದಲ್ಲಿ ಸಾಧನೆಗೈದ ಒಬ್ಬ ಮಹಿಳೆಗೆ ನಮ್ಮ ಮಹಿಳಾ ಮಂಡಲದ ವತಿಯಿಂದ ಆಚಾರ್ಯ ತುಳಸಿ ಅವರ ಹೆಸರಿನಲ್ಲಿ ಪುರಸ್ಕಾರ ನೀಡಲಾಗುತ್ತಿದೆ. ಈ ಬಾರಿ ಸುಮಿತ್ರಾ ಮಹಾಜನ್‌ರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News