ಕೆ. ಸಂಜೀವ ಪೂಜಾರಿ
Update: 2019-09-14 16:55 GMT
ಮೂಡುಬಿದಿರೆ: ನಿವೃತ್ತ ಅರಣ್ಯಾಧಿಕಾರಿ, ಮೂಡುಬಿದಿರೆ ಗಾಂಧಿನಗರ ನಿವಾಸಿ ಕೆ.ಸಂಜೀವ ಪೂಜಾರಿ (65) ಅವರು ಹೃದಯಾಘಾತದಿಂದ ಶನಿವಾರ ನಿಧನರಾದರು.
ಬೆಳ್ಮಣ್, ಮಡಿಕೇರಿ, ಉಪ್ಪಳ, ಪುತ್ತೂರು, ಕೊಲ್ಲೂರು, ಸುಳ್ಯ, ಮೂಡುಬಿದಿರೆಯಲ್ಲಿ ಅರಣ್ಯಾಧಿಕಾರಿಯಾಗಿ 36 ವರ್ಷಗಳು ಸೇವೆ ಸಲ್ಲಿಸಿ ಅವರು ನಿವೃತ್ತರಾಗಿದ್ದರು.
ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.