"ಎಚ್.ಡಿ.ದೇವೇಗೌಡ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರ"

Update: 2019-09-17 16:49 GMT

ಬೆಂಗಳೂರು, ಸೆ.17: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಟುಂಬ ವರ್ಗದ ವಿರುದ್ಧ ಅನರ್ಹ ಶಾಸಕ ನಾರಾಯಣಗೌಡ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಮಾಜಿ ಕೈಗಾರಿಕೋದ್ಯಮಿಗಳ ರಾಜ್ಯ ಘಟಕದ ಅಧ್ಯಕ್ಷ ಟಿ.ಆರ್.ಪ್ರಸಾದ್ ಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣಗೌಡ ಯಾರಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದಿರಿ, ಸೀಟು ಪಡೆಯುವಾಗ ಮತ್ತೆ ಕ್ಷೇತ್ರದಲ್ಲಿ ಗೆಲ್ಲುವಾಗ ನಿಮಗೆ ದೇವೇಗೌಡರ ಪುತ್ರಿಯರ ಅನುಗ್ರಹ ಬೇಕಿತ್ತು. ಈಗ ಅವರು ನಿಮಗೆ ಖಳನಾಯಕರಾಗಿ ಕಾಣುತ್ತಿದ್ದಾರೆ. ದೇವೇಗೌಡರ ಅನುಗ್ರಹದಿಂದ ಎಲ್ಲವನ್ನೂ ಪಡೆದದ್ದಲ್ಲದೆ, ಡಿ.ಕೆ.ಶಿವಕುಮಾರ್ ಅವರನ್ನು ತೊಂದರೆಗೆ ಸಿಲುಕಿಸಿದ್ದು, ದೇವೇಗೌಡರು ಎಂದು ಅಪಪ್ರಚಾರ ಮಾಡಿದ್ದೀರಿ ಎಂದು ಆರೋಪಿಸಿದರು.

ದೇವೇಗೌಡರ ವಿರುದ್ಧ ಅಪಪ್ರಚಾರ ಮಾಡಲು ನಿಮಗೆ ಸುಪಾರಿ ಕೊಟ್ಟವರು ಯಾರು ಎಂದು ಪ್ರಶ್ನಿಸಿ, ಮಾಜಿ ಪ್ರಧಾನಿಗಳಾಗಿದ್ದವರ ವಿರುದ್ಧ ಆರೋಪ ಮಾಡುವಾಗ ಸೂಕ್ತ ಸಾಕ್ಷಧಾರಗಳು ಇರಬೇಕೆನ್ನುವುದು ನಿಮಗೆ ತಿಳಿದಿಲ್ಲವೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News