ಕಾಶ್ಮೀರವನ್ನು ‘ಜೈಲು’ ಮಾಡಿದ್ದಕ್ಕಾಗಿ ಬಿಜೆಪಿ ನಾಯಕರು ಪ್ರಚಾರಕ್ಕೆ ಹೊರಟಿದ್ದಾರೆ: ಸಿದ್ದರಾಮಯ್ಯ

Update: 2019-09-20 13:01 GMT

ಬೆಂಗಳೂರು, ಸೆ. 20: ‘ನಮ್ಮ ದೇಶಪ್ರೇಮಿ ಬಿಜೆಪಿ ನಾಯಕರು ಮಾತ್ರ ಕಾಶ್ಮೀರವನ್ನು ‘ಜೈಲು’ ಮಾಡಿದ್ದಕ್ಕಾಗಿ ಪ್ರಚಾರಕ್ಕೆ ಹೊರಟಿದ್ದಾರೆ. ಎಂತಹ ದೇಶಪ್ರೇಮ!’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

‘ಅರ್ಧದಷ್ಟು ಖಾತೆಗಳಿಗೆ ಪೂರ್ಣಪ್ರಮಾಣದ ಸಚಿವರಿಲ್ಲ, ಉಸ್ತುವಾರಿ ಸಚಿವರ ಪತ್ತೆಯಿಲ್ಲ, ನೆರೆ ಸಂತ್ರಸ್ತರಿಗೆ ಪರಿಹಾರವನ್ನು ಕೇಂದ್ರ ಸರಕಾರ ಕೊಡುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪ್ರಧಾನಿ ಮೋದಿ ಭೇಟಿ ಮಾಡುತ್ತಿಲ್ಲ’ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News