ಸಿಎಂ ಪರಿಹಾರ ನಿಧಿಗೆ ಐದು ಕೋಟಿ ರೂ. ಚೆಕ್ ಹಸ್ತಾಂತರ

Update: 2019-09-23 16:59 GMT

ಬೆಂಗಳೂರು, ಸೆ.23: ಬೆಂಗಳೂರು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಐದು ಕೋಟಿ ರೂ.ಗಳ ಪರಿಹಾರ ಧನದ ಚೆಕ್ ಅನ್ನು ಹಸ್ತಾಂತರ ಮಾಡಲಾಯಿತು.

ಬೆಂಗಳೂರು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ವಿ.ಪಿ ಇಕ್ಕೇರಿ, ನಿರ್ದೇಶಕ ಚಿನ್ನಸ್ವಾಮಿ, ಹೆಚ್ಚುವರಿ ನಿರ್ದೇಶಕ ಧನಂಜಯ ರೆಡ್ಡಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ ಚೆಕ್ ಹಸ್ತಾಂತರ ಮಾಡಿದರು.

ರಾಜ್ಯದಲ್ಲಿ ಸಂಭವಿಸಿದ ನೆರೆಹಾನಿಯಿಂದ ಸಂತ್ರಸ್ತರಾದವರ ಪುನರ್ವಸತಿ ಯೋಜನೆಗಳಿಗೆ ಕೈ ಜೋಡಿಸುವ ವಾಗ್ದಾನದಂತೆ ಐದು ಕೋಟಿ ರೂ.ಗಳ ಚೆಕ್‌ನ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಹಸ್ತಾಂತರ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News