ರಾಜ್ಯ ಬಿಜೆಪಿ ಗುಜರಾತಿಗಳಿಗೆ ಶರಣಾಗಿದೆ: ಬಿಬಿಎಂಪಿ ಮೇಯರ್ ಆಯ್ಕೆ ಬಗ್ಗೆ ರಮೇಶ್ ಬಾಬು ಆಕ್ರೋಶ
Update: 2019-10-01 18:09 GMT
ಬೆಂಗಳೂರು, ಅ.1: ಕನ್ನಡ ವಿರೋಧಿ ಗೌತಮ್ ಜೈನ್ರನ್ನು ಬೆಂಗಳೂರು ಮಹಾಪೌರ(ಮೇಯರ್)ನಾಗಿ ಹೈ ಕಮಾಂಡ್ ಆದೇಶದಂತೆ ಆಯ್ಕೆ ಮಾಡಿ ರಾಜ್ಯ ಬಿಜೆಪಿ ಗುಜರಾತಿಗಳಿಗೆ ಶರಣಾಗಿದೆ. ಸ್ವಾಭಿಮಾನವನ್ನು ಅಡವಿಟ್ಟು ರಾಜಕಾರಣ ಮಾಡುವ ಬದಲು, ತಂತಿ ನಡಿಗೆಯಲ್ಲಿ ಕುಡಿಯುವ ಬದಲು, ಯಡಿಯೂರಪ್ಪ ರಾಜೀನಾಮೆ ನೀಡಲಿ. ಜಾಣ ಮೌನ, ಅವಮಾನದ ನಡೆ ಯಡಿಯೂರಪ್ಪ ಅವರ ಅಸಲಿತನವೇ? ರಾಜ್ಯದ ದುರಂತ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಟ್ವೀಟ್ ಮಾಡಿದ್ದಾರೆ.