ದೊಡ್ಡಬಿದರಕಲ್ಲು ಕೆರೆ ಏರಿ ಒಡೆಯಲು ಕಾಮಗಾರಿ ಕಾರಣವಲ್ಲ: ಬಿಬಿಎಂಪಿ ಆಯುಕ್ತ ಸ್ಪಷ್ಟನೆ

Update: 2019-10-11 17:14 GMT

ಬೆಂಗಳೂರು, ಅ.11: ದೊಡ್ಡಬಿದರಕಲ್ಲು ಕೆರೆ ಏರಿ ಒಡೆಯಲು ಬುಧವಾರ ರಾತ್ರಿ ಸುರಿದ ಮಳೆ ಮುಖ್ಯ ಕಾರಣ. ಬಿಡಬ್ಲೂಎಸ್‌ಎಸ್‌ಬಿ ಕಾರಣವಲ್ಲ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಜಲಮಂಡಳಿಯು ಕೊಳವೆ ಮಾರ್ಗದ ಕಾಮಗಾರಿಯನ್ನು ಕೈಗೊಂಡಾಗ ಈಗಾಗಲೇ ಅಸ್ತಿತ್ವದಲ್ಲಿದ್ದ ಕೆರೆಯ ತೂಬಿನ ಮುಖಾಂತರ ಕೊಳವೆಯನ್ನು ತ್ಯಾಜ್ಯ ನೀರಿನ ಶುದ್ಧೀಕರಣ ಘಟಕಕ್ಕೆ ಅಳವಡಿಸಲಾಗಿದೆ. ಈ ಕಾಮಗಾರಿ ಸಮಯದಲ್ಲಿ ಕೆರೆಯ ಏರಿಯಾಗಲಿ ಹಾಗೂ ತೂಬಾಗಲಿ ಯಾವುದೇ ಹಾನಿಯಾಗದಂತೆ ಕೆಲಸ ನಿರ್ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆರೆಯ ಏರಿಗೆ ಯಾವುದೇ ರೀತಿಯಾದ ಹಾನಿ ಉಂಟಾಗಲು ಸಾಧ್ಯವಿರುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News