ಸೂಕ್ತ ಸಮಯದಲ್ಲಿ ಬೌದ್ಧ ಧರ್ಮ ಸ್ವೀಕರಿಸುತ್ತೇನೆ ಎಂದ ಮಾಯಾವತಿ

Update: 2019-10-15 12:02 GMT

ನಾಗ್ಪುರ್, ಅ.15: 'ಸೂಕ್ತ' ಸಮಯದಲ್ಲಿ ತಾನು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಬಿಎಸ್‍ ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ನಾಗ್ಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಂದರ್ಭ ಮಾಯಾವತಿ ಮೇಲಿನ ಮಾತುಗಳನ್ನು ಹೇಳಿದರು.

"ಬಾಬಾ ಸಾಹೇಬ್ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದರು. ಬೆಹೆನ್ ಜಿ ಯಾವಾಗ ಬಾಬಾ ಸಾಹೇಬ್ ಅವರ ಮಾರ್ಗವನ್ನನುಸರಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆಂದು ನೀವು ಯೋಚಿಸುತ್ತಿರಬಹುದು. ನನ್ನ ಉತ್ತರವೇನೆಂದರೆ ನಾನು ಬೌದ್ಧ ಧರ್ಮದ ದೀಕ್ಷೆಯನ್ನು ಸೂಕ್ತ ಸಮಯದಲ್ಲಿ ಸ್ವೀಕರಿಸುತ್ತೇನೆ. ನನ್ನ ಜತೆ ದೊಡ್ಡ ಸಂಖ್ಯೆಯಲ್ಲಿ ಜನರು ಬೌದ್ಧ ಧರ್ಮ ಸ್ವೀಕರಿಸುತ್ತಾರೆ" ಎಂದು ಮಾಯಾವತಿ ಹೇಳಿದರು.

"ಬಾಬಾ ಸಾಹೇಬ್ ಅವರ ಅನುಯಾಯಿಗಳು ರಾಜಕೀಯದಲ್ಲಿ ಅವರ ಹಾದಿಯಲ್ಲಿ ನಡೆಯಬೇಕು" ಎಂದೂ ಅವರು ತಮ್ಮ ಭಾಷಣದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News