ಕಡೆಕಾರ್ ಬಾಲಕೃಷ್ಣ ಭಟ್
Update: 2019-10-15 14:07 GMT
ಉಡುಪಿ, ಅ.15: ಕಳೆದ ಐದು ವರ್ಷಗಳಿಂದ ಆಂಧ್ರ ಪ್ರದೇಶದ ಮಚಲೀಪಟ್ಟಣದಲ್ಲಿ ಹೊಟೇಲ್ ಉದ್ಯಮಿಯಾಗಿರುವ ಕಡೆಕಾರ್ ಬಾಲಕೃಷ್ಣ ಭಟ್ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ಪ್ರಾಯವಾಗಿತ್ತು.
40 ದಿನಗಳ ಹಿಂದೆ ವಾಹನ ಅಪಘಾತವೊಂದರಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ದೈವ ಭಕ್ತರೂ, ದಾನಿಯೂ ಆಗಿರುವ ಇವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.