ವಿವಿಧ ಪ್ರಾಧಿಕಾರ-ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ

Update: 2019-10-15 15:04 GMT

ಬೆಂಗಳೂರು, ಅ.15: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ, ಬ್ಯಾರಿ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಸೇರಿದಂತೆ ಇನ್ನಿತರ ಪ್ರಾಧಿಕಾರ ಹಾಗೂ ಅಕಾಡೆಮಿಗಳಿಗೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರಕಾರವು ಮಂಗಳವಾರ ಆದೇಶ ಹೊರಡಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಅಧ್ಯಕ್ಷ-ಟಿ.ಎಸ್.ನಾಗಾಭರಣ, ಸದಸ್ಯರು-ಕಬ್ಬಿನಾಲೆ ವಸಂತ ಭಾರದ್ವಾಜ, ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ರೋಹಿತ್ ಚಕ್ರತೀರ್ಥ, ಅಬ್ದುಲ್ ರಹ್ಮಾನ್ ಪಾಷ, ರಮೇಶ್ ಗುಬ್ಬಿಗೂಡ, ಸುರೇಶ್ ಬಡಿಗೇರ, ಎನ್.ಆರ್.ವಿಶುಕುಮಾರ್.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಅಧ್ಯಕ್ಷ-ಅಜರ್ಕಳ ಗಿರೀಶ್ ಭಟ್, ಸದಸ್ಯರು-ಅಜ್ಜಂಪುರ ಮಂಜುನಾಥ, ಡಾ.ಮಾಧವ ಪೆರಾಜೆ, ಡಾ.ಷಣ್ಮುಖ, ಡಾ.ಎಂ.ಎಸ್.ಚೈತ್ರ, ಡಾ.ಡಂಕಿನ್ ಜಳಕಿ, ಸ.ಗಿರಿಜಾ ಶಂಕರ್.

ಕನ್ನಡ ಪುಸ್ತಕ ಪ್ರಾಧಿಕಾರ: ಅಧ್ಯಕ್ಷ-ಡಾ.ಎಂ.ಎನ್.ನಂದೀಶ್ ಹಂಜೆ, ಸದಸ್ಯರು-ಅಶೋಕ ರಾಯ್ಕರ್, ಡಾ.ಪುರುಷೋತ್ತಮ ಗೌಡ, ಟಿ.ಎ.ಎನ್.ಖಂಡಿಗೆ, ಸಂಗಮೇಶ್ ಪೂಜಾರ್, ಪ್ರಕಾಶ್ ಕಂಬತ್ತಹಳ್ಳಿ, ಪ್ರೊ.ಗದ್ದಗಿಮಠ, ಎ.ವಿ.ನಾವಡ, ಎಚ್.ಬಿ.ಬೋರಲಿಂಗಯ್ಯ.

ಕರ್ನಾಟಕ ಸಾಹಿತ್ಯ ಅಕಾಡೆಮಿ: ಅಧ್ಯಕ್ಷ-ಡಾ.ಬಿ.ವಿ.ವಸಂತಕುಮಾರ್, ಸದಸ್ಯರು-ಜಿನದತ್ತ ಹಡಗಲಿ, ಛಾಯಾ ಭಗವತಿ, ರೋಹಿಣಾಕ್ಷ ಶಿರ್ಲಾಲು, ಸಂತೋಷ್ ತಮ್ಮಯ್ಯ, ಡಾ.ಬಿ.ಎಂ.ಶರಭೇಂದ್ರ ಸ್ವಾಮಿ, ಪಾವರ್ತಿ ಪಿಟಗಿ, ಪ್ರೊ.ಕೃಷ್ಣೇಗೌಡ, ಡಾ.ಎನ್.ಎಸ್.ತಾರಾನಾಥ(ಮೈಸೂರು), ಡಾ.ವೈ.ಸಿ.ಭಾನುಮತಿ.

ನಾಟಕ ಅಕಾಡೆಮಿ: ಅಧ್ಯಕ್ಷ-ಭೀಮಸೇನ, ಸದಸ್ಯರು- ಎಂ.ಕೆ.ಮಠ, ಪ್ರೇಮಾ ಬದಾಮಿ, ಪ್ರಭುದೇವ ಕಪ್ಪಗಲ, ವಿನೋದ ಅಂಬೇಕರ್, ಶಿವಪ್ಪ ಭರಮಪ್ಪ ಅದರಗುಂಚಿ, ಜೋಸೆಫ್, ಡಾ.ಎಂ.ಗುಣಶೀಲನ್, ಕೆ.ಆರ್.ಪ್ರಕಾಶ್, ಟಿ.ಎ.ರಾಶಿವಯ್ಯ(ತುಮಕೂರು), ನಾಗರಾಜ ರಾವ್ ಕಲ್ಕಟ್ಟೆ(ಚಿಕ್ಕಮಗಳೂರು), ಯಶವಂತರಾವ್ ಸರ್ ದೇಶಪಾಂಡೆ, ವೈದ್ಯನಾಥ್ ಬಿರಾದಾರ್(ಬೀದರ್), ಟಿ.ರಾಜರಾಮ್.

ಸಂಗೀತ-ನೃತ್ಯ ಅಕಾಡೆಮಿ: ಅಧ್ಯಕ್ಷ-ಆನೂರು ಅನಂತಕೃಷ್ಣ ಶರ್ಮ, ಸದಸ್ಯರು-ಡಾ.ವೀರಣ್ಣ ಪತ್ತರ್, ಡಾ.ನಿರುಪಮಾ ರಾಜೇಂದ್ರ, ಶಂಕರ ಶಾನುಭಾಗ್, ಸುಜೇಂದ್ರ ಬಾಬು, ರಾಜಗೋಪಾಲ್, ಹೊಸಹಳ್ಳಿ ವೆಂಕಟರಾಮ್, ಶಾರದಾಮಣಿ ಶೇಖರ್, ರಮ್ಯ ಸೂರಜ್, ಹೇಮಾ ವಾಗ್ಮೋರೆ, ರೇಖಾ ಪ್ರೇಮಕುಮಾರ್, ಪದ್ಮಿನಿವೋಕ್, ಕಿಕ್ಕೇರಿ ಕೃಷ್ಣಮೂರ್ತಿ.

ಶಿಲ್ಪಕಲಾ ಅಕಾಡೆಮಿ: ಅಧ್ಯಕ್ಷ-ವೀರಣ್ಣ ಅರ್ಕಸಾಲಿ, ಸದಸ್ಯರು-ರಾಜೇಶ್ ಪತ್ತಾರ್, ಸುರೇಶ್ ಗುಡಿಗಾರ್, ಅಣ್ಣಪ್ಪ ಆಚಾರ್ಯ, ಚಂದ್ರಶೇಖರ್ ನಾಯ್ಕ, ನಟರಾಜ್, ಶ್ರೀಧರ ಕಾಶಿನಾಥ್, ಕೃಷ್ಣಪ್ಪ ಬಡಿಗೇರ, ಸುರೇಶ್ ಎಸ್.ಕಮ್ಮಾರ್, ಮಂಜುನಾಥ್ ಆಚಾರ್, ಜಗದೀಶ್ ಎಸ್.ದೊಡ್ಡಮನಿ, ಮನೋಹರ್ ಕಾಳಪ್ಪ ಪತ್ತಾರ್.

ಲಲಿತಾ ಅಕಾಡೆಮಿ: ಅಧ್ಯಕ್ಷ-ಡಿ.ಮಹೇಂದ್ರ, ಸದಸ್ಯರು-ರಮೇಶ್ ಚೌಹಾಣ್, ಬಿ.ಆರ್.ಉಪ್ಪಳ, ಗಣೇಶ್ ಧಾರೇಶ್ವರ, ನರಸಿಂಹಮೂರ್ತಿ, ವಿನೋದ್ ಕುಮಾರ್, ಲಕ್ಷ್ಮಿ ಮೈಸೂರು, ಸೂರ್ಯಪ್ರಕಾಶ್, ಆತ್ಮಾನಂದ ಎಚ್.ಎ., ಅನೀಸ್ ಫಾತಿಮಾ, ಜಯಾನಂದ ಮಾದರ.

ಯಕ್ಷಗಾನ ಅಕಾಡೆಮಿ: ಅಧ್ಯಕ್ಷ-ಪ್ರೊ.ಎಂ.ಎ.ಹೆಗ್ಡೆ, ಸದಸ್ಯರು-ಮಾಧವ ಭಂಡಾರಿ, ನವನೀತ ಶೆಟ್ಟಿ, ಆರತಿ ಪಟ್ರಮೆ, ರಾಧಾಕೃಷ್ಣ ಕಲ್ಚಾರು, ರಮೇಶ್ ಬೇಗಾರು, ದಿವಾಕರ ಹೆಗಡೆ, ಕೆ.ಎಂ.ಶೇಖರ್, ಶ್ರೀನಿವಾಸ್ ಸಾಸ್ತಾನ್, ಯೋಗೇಶ್ ರಾವ್, ಜಿ.ಎಸ್.ಭಟ್(ಮೈಸೂರು), ನಿರ್ಮಲಾ ಮಂಜುನಾಥ ಹೆಗಡೆ.

ಜಾನಪದ ಅಕಾಡೆಮಿ: ಅಧ್ಯಕ್ಷೆ-ಮಂಜಮ್ಮ ಜೋಗತಿ, ಸದಸ್ಯರು-ಲಿಂಗಪ್ಪ, ಶಂಕರ ಅರ್ಕಸಾಲಿ, ಚಟ್ಟಿಕುಟ್ಟಡ ಡಾ.ಅನಂತಸುಬ್ಬಯ್ಯ, ಕುಡಿಯರ ಬೋಜಕ್ಕಿ, ಅಮರಯ್ಯ ಸ್ವಾಮಿ, ಡಾ.ವೇಮಗಲ್ ನಾರಾಯಣಸ್ವಾಮಿ, ಡಾ.ರಾಜೇಂದ್ರ ಯರನಾಳ, ಡಾ.ಪಿ.ಕೆ.ರಾಜಶೇಖರ್, ಪುಷ್ಪಲತಾ, ಎಸ್.ಜಿ.ಲಕ್ಷ್ಮಿದೇವಮ್ಮ, ಬೂದ್ಯಪ್ಪ.

ತುಳು ಸಾಹಿತ್ಯ ಅಕಾಡೆಮಿ: ಅಧ್ಯಕ್ಷ-ದಯಾನಂದ ಕತ್ತಲಸರ, ಸದಸ್ಯರು- ಲೀಲಾಕ್ಷ ಕರ್ಕೇರ, ರವೀಂದ್ರ ಶೆಟ್ಟಿ ಬಳಂಜ, ಡಾ.ಸಾಯಿಗೀತ ಹೆಗಡೆ, ನಾಗೇಶ್ ಕುಲಾಲ್, ವಿಜಯಲಕ್ಷ್ಮಿ ರೈ, ಮಲ್ಲಿಕಾ ಶೆಟ್ಟಿ, ಕಡಬ ದಿನೇಶ್ ರೈ, ಡಾ.ವೈ.ಎನ್.ಶೆಟ್ಟಿ, ತಾರಾ ಉಮೇಶ್, ನಿಟ್ಟೆ ಶಶಿಧರ ಶೆಟ್ಟಿ, ಆಕಾಶ್‌ರಾಜ್ ಜೈನ್.

ಕೊಡವ ಸಾಹಿತ್ಯ ಅಕಾಡೆಮಿ: ಅಧ್ಯಕ್ಷ-ಡಾ.ಪಾವರ್ತಿ ಅಪ್ಪಯ್ಯ, ಸದಸ್ಯರು-ಗೌರಮ್ಮ ಮದಮ್ಮಯ್ಯ, ಜಾನಕಿ ಮಾಚಯ್ಯ, ಬಬ್ಬಿರ ಸರಸ್ವತಿ, ಶಂಬಯ್ಯ, ಪಡಿರಂಡ ಪ್ರಭುಕುಮಾರ್, ರವಿ ಕಾಳಪ್ಪ, ಮೆಚ್ಚಿರ ಸುಭಾಷ್ ನಾಣಯ್ಯ.

ಕೊಂಕಣಿ ಸಾಹಿತ್ಯ ಅಕಾಡೆಮಿ: ಅಧ್ಯಕ್ಷ-ಡಾ.ಜಗದೀಶ್ ಪೈ, ಸದಸ್ಯರು-ಗುರುಮೂರ್ತಿ ಶೇಟ್, ಗೋಪಿ ಭಟ್, ನವೀನ್ ನಾಯ್ಕ, ಚಿದಾನಂದ ಹರಿಭಂಡಾರಿ, ಭಾಸ್ಕರ ನಾಯಕ್, ಸುರೇಂದ್ರ ವಿ.ಬಾಲಂಕರ್, ಪ್ರಮೋದ್ ಸೇಟ್, ಪೂರ್ಣಿಮಾ ಸುರೇಶ್ ನಾಯ್ಕ, ಕೆ.ನಾರಾಯಣ ಕಾರ್ವಿ, ಡಾ.ವಸಂತ ಬಾಂದೇಕರ್, ಅರುಣ್ ಜಿ.ಸೇಟ್.

ಬ್ಯಾರಿ ಸಾಹಿತ್ಯ ಅಕಾಡೆಮಿ: ಅಧ್ಯಕ್ಷ-ರಹೀಂ ಉಚ್ಚಿಲ, ಸದಸ್ಯರು-ರೂಪೇಶ್ ಕುಮಾರ್, ಮುರಳಿ ರಾಜ್, ಡಾ.ಮುನೀರ್ ಬಾವ, ಸುರೇಖಾ, ಚಂಚಲಾಕ್ಷಿ, ಫಸಲ್ ಹಸೈಗೋಳಿ, ಸಿರಾಜ್ ಮುಡಿಪು.

ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ: ಅಧ್ಯಕ್ಷ-ಲಕ್ಷ್ಮಿನಾರಾಯಣ ಕಜೆಗದ್ದೆ, ಸದಸ್ಯರು-ಜಾನಕಿ ಬೈತಡ್ಕ, ಸ್ಮಿತಾ ಅಮೃತರಾಜ್, ಪ್ರೇಮಾ ರಾಘವಯ್ಯ, ಎ.ಪಿ.ಧನಂಜಯ, ಆನಂದ ದಂಬೆಕೊಡಿ, ಸೋಮಣ್ಣ ಆರ್.ಸೂರ್ತಲೆ.

ಬಯಲಾಟ ಅಕಾಡೆಮಿ: ಅಧ್ಯಕ್ಷ-ಸೊರಬಕ್ಕನವರ್ ಹಾವೇರಿ, ಸದಸ್ಯರು- ಎನ್.ಎಸ್.ರಾಜು, ಡಾ.ಕರಿಶೆಟ್ಟಿ ರುದ್ರಪ್ಪ ಬಳ್ಳಾರಿ, ಗಂಗವ್ವ, ಬಿರಾದಾರ್ ಹಳಿಯಾಳ, ಶಿವಲಿಂಗಪ್ಪ ಪೂಜಾರಿ, ಕೆ.ಸತ್ಯನಾರಾಯಣ, ಮಂಜು ಗುರುಲಿಂಗ, ಡಾ.ಅನುಪಮ ಹೊಸಕೆರೆ, ಚರಚೋಗಿ ಬಸವರಾಜು, ಶಿವಾನಂದ ಶೆಲ್ಲಿಕೇರಿಯನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯ ಸರಕಾರದ ಅಪರ ಕಾರ್ಯದರ್ಶಿ ಜಿ.ಎಚ್.ಅನಸೂಯಮ್ಮ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News