ಮತದಾರರ ವಿವರ ಪರಿಶೀಲನೆ ಅಭಿಯಾನದಲ್ಲಿ ಶೇ.37ರಷ್ಟು ಪ್ರಗತಿ: ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್

Update: 2019-10-18 13:02 GMT

ಬೆಂಗಳೂರು, ಅ.18: ಮತದಾರರ ವಿವರ ಪರಿಶೀಲನೆ ಅಭಿಯಾನದಲ್ಲಿ ಈವರೆಗೆ ಶೇ.37ರಷ್ಟು ಪ್ರಗತಿ ಸಾಧಿಸಲಾಗಿದೆ. 5.10 ಕೋಟಿ ಮತದಾರರ ಪೈಕಿ 1.88 ಕೋಟಿ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.

ಶುಕ್ರವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ನಿರ್ವಾಚನ ನಿಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ 15.04 ಲಕ್ಷ ಮತದಾರರ ಪೈಕಿ 12.14 ಲಕ್ಷ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿದ್ದು ಶೇ.81ರಷ್ಟು ಪ್ರಗತಿ ಸಾಧಿಸುವ ಮೂಲಕ ಇಡೀ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.

ಚಿತ್ರದುರ್ಗ-ಶೇ.63, ಹಾವೇರಿ-ಶೇ.60, ಹಾಸನ-ಶೇ.56, ಉಡುಪಿ-ಶೇ.54, ಉತ್ತರ ಕನ್ನಡ-ಶೇ.52, ಚಿಕ್ಕಮಗಳೂರು-ಶೇ.52, ಚಿಕ್ಕಬಳ್ಳಾಪುರ-ಶೇ.52, ರಾಮನಗರ-ಶೇ.52, ಯಾದಗಿರಿ-ಶೇ.50, ತುಮಕೂರು-ಶೇ.49, ಕೊಪ್ಪಳ-ಶೇ.47, ದಾವಣಗೆರೆ-ಶೇ.43, ಬಿಜಾಪುರ-ಶೇ.41, ಗುಲ್ಬರ್ಗ-ಶೇ.41, ಬೀದರ್-ಶೇ.41, ಶಿವಮೊಗ್ಗ-ಶೇ.41, ಕೋಲಾರ-ಶೇ.41, ಚಾಮರಾಜನಗರ-ಶೇ.41ರಷ್ಟು ಪ್ರಗತಿಯಾಗಿದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.

ರಾಯಚೂರು-ಶೇ.40, ಗದಗ-ಶೇ.40, ಬೆಂಗಳೂರು ಗ್ರಾಮಾಂತರ-ಶೇ.35, ಬಿಬಿಎಂಪಿ(ಉತ್ತರ)-ಶೇ.32, ದಕ್ಷಿಣ ಕನ್ನಡ-ಶೇ.31, ಕೊಡಗು-ಶೇ.27, ಮೈಸೂರು-ಶೇ.26, ಬಿಬಿಎಂಪಿ(ದಕ್ಷಿಣ)- ಶೇ.26, ಬೆಂಗಳೂರು ನಗರ-ಶೇ.26, ಬಳ್ಳಾರಿ-ಶೇ.24, ಬಿಬಿಎಂಪಿ(ಕೇಂದ್ರ)- ಶೇ.22, ಧಾರವಾಡ-ಶೇ.20ರಷ್ಟು ಪ್ರಗತಿಯಾಗಿದೆ. ನೆರೆ ಹಾವಳಿಯಿಂದಾಗಿ ಬಾಗಲಕೋಟೆ-ಶೇ.10 ಹಾಗೂ ಬೆಳಗಾವಿಯಲ್ಲಿ ಶೇ.6ರಷ್ಟು ಮಾತ್ರ ಪ್ರಗತಿಯಾಗಿದೆ ಎಂದು ಅವರು ಹೇಳಿದರು.

ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಲು ನವೆಂಬರ್ 18ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮತದಾರರ ಕರಡು ಪಟ್ಟಿಯನ್ನು ನ.25ರಂದು ಪ್ರಕಟಿಸಲಾಗುವುದು. ಆಕ್ಷೇಪಣೆ ಸಲ್ಲಿಸಲು ನ.25 ರಿಂದ ಡಿ.24ರವರೆಗೆ ಅವಕಾಶ ಕಲ್ಪಿಸಲಾಗುವುದು. 2020ರ ಜನವರಿ 10 ವೇಳೆಗೆ ಆಕ್ಷೇಪಣೆಗಳನ್ನು ಇತ್ಯರ್ಥಗೊಳಿಸಲಾಗುವುದು. ಜ.20ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಸಂಜೀವ್ ಕುಮಾರ್ ಹೇಳಿದರು.

ಮತದಾರರು Voter helpline ಮೊಬೈಲ್ ಆ್ಯಪ್, ಎನ್‌ವಿಎಸ್‌ಪಿ ಪೋರ್ಟಲ್ http://www.nvsp.in ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿಎಸ್), ಇಆರ್‌ಓ ಕಚೇರಿಗಳಿಗೆ ಭೇಟಿ ನೀಡಬಹುದು. ಅಲ್ಲದೆ, ಮತದಾರರ ಸಹಾಯವಾಣಿ 1950ಗೂ ಕರೆ ಮಾಡಬಹುದುದಾಗಿದೆ ಎಂದು ಅವರು ತಿಳಿಸಿದರು.

ಮತದಾರರು ತಮ್ಮ ವಿವರಗಳಲ್ಲಿ ಯಾವುದಾದರೂ ತಪ್ಪುಗಳಿದ್ದಲ್ಲಿ ಅದನ್ನು ಸರಿಪಡಿಸಲು ಅರ್ಜಿ ಸಂಖ್ಯೆ-8ರ ಜೊತೆ ಆಧಾರ್, ಪಾಸ್‌ಪೋರ್ಟ್, ಬ್ಯಾಂಕ್ ಪಾಸ್‌ಬುಕ್, ಪಡಿತರ ಚೀಟಿ ಸೇರಿದಂತೆ ಇನ್ನಿತರ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಕಾಲಮಿತಿಯಲ್ಲಿ ತಪ್ಪುಗಳನ್ನು ತಿದ್ದುವ ಕೆಲಸವನ್ನು ಚುನಾವಣಾ ಆಯೋಗ ಮಾಡಲಿದೆ ಎಂದು ಸಂಜೀವ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News