ಯುವತಿಗೆ ಕಿರುಕುಳ ಆರೋಪ: ಯುವಕನ ಬಂಧನ

Update: 2019-10-18 14:26 GMT

ಬೆಂಗಳೂರು, ಅ.18: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪದಡಿ ಯುವಕನೋರ್ವನನ್ನು ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೆಳ್ಳಂದೂರಿನ ಯಮಲೂರಿನ ನಿತಿನ್ ಆಚಾರಿ(25) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕೊಂಡಕುಳಿ ಮೂಲದ ಆರೋಪಿಯು ಹಿಂದೆ ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಈ ಸಂದರ್ಭದಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ. ಆದರೆ, ಯುವತಿ ಬೇರೆ ಸಹೋದ್ಯೋಗಿಗಳೊಂದಿಗೆ ಇರುವ ಕ್ಷಣಗಳನ್ನು ನೋಡಿ ಸಹಿಸದ ಆರೋಪಿ ನಿತಿನ್ ಆಚಾರಿ, ಆಕ್ರೋಶಗೊಂಡು ಅನ್ಯ ವ್ಯಕ್ತಿಯ ಹೆಸರಲ್ಲಿ ಸಾಮಾಜಿಕ ಜಾಲತಾಣ ಇ-ಮೇಲ್ ಮೂಲಕ ಖಾತೆ ತೆರೆದು, ಯುವತಿಯ ಭಾವಚಿತ್ರಗಳನ್ನು ಕಳುಹಿಸಿ, ತೇಜೋವಧೆ ಮಾಡಿದ್ದ ಎಂದು ತಿಳಿದುಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ, ಸೈಬರ್ ಠಾಣಾ ಪೊಲೀಸರು, ಆರೋಪಿಯನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News