ಕಳವು ಪ್ರಕರಣ: ಅಸ್ಸಾಂ ಮೂಲದ ಆರೋಪಿ ಬಂಧನ
Update: 2019-10-19 17:37 GMT
ಬೆಂಗಳೂರು, ಅ. 19: ಕಂಪೆನಿ ಮಾಲಕರ ಹಣವಿದ್ದ ಲಾಕರ್ ಕದ್ದು, ಪರಾರಿಯಾಗಿದ್ದ ಆರೋಪ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಡೇಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಎಂ.ಹುಸೇನ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಡೇಪಾಳ್ಯದ ಮುನೇಶ್ವರ ನಗರದಲ್ಲಿ ಖಾಸಗಿ ಕಂಪೆನಿ ಮಾಲಕರೊಬ್ಬರ ಹಣವಿದ್ದ ಲಾಕರ್ ತೆಗೆದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿದ ಬಂಡೆಪಾಳ್ಯ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಅಸ್ಸಾಂಗೆ ಪರಾರಿಯಾಗಲು ಯತ್ನಿಸಿದ ಎಂ.ಹುಸೇನ್ನನ್ನು ಬಂಧಿಸಿ, 12 ಲಕ್ಷ ರೂ.ಗಳಿದ್ದ ಲಾಕರ್ನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.