ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಾಂಗ್ಲಾ ಕ್ರಿಕೆಟಿಗರ ಮುಷ್ಕರ, ಭಾರತ ಪ್ರವಾಸ ಅನುಮಾನ

Update: 2019-10-21 18:44 GMT

ಢಾಕಾ, ಅ.21: ವೇತನ ಹೆಚ್ಚಳ ಸಹಿತ ವಿವಿಧ 11 ಬೇಡಿಕೆಗಳು ಈಡೇರುವ ತನಕ ಯಾವುದೇ ಕ್ರಿಕೆಟ್ ಚಟುವಟಿಕೆಗಳಲ್ಲಿ ಭಾಗವಹಿಸಲು ಆಟಗಾರರು ನಿರಾಕರಿಸುವುದರೊಂದಿಗೆ ಬಾಂಗ್ಲಾದೇಶದ ಮುಂಬರುವ ಭಾರತದ ಕ್ರಿಕೆಟ್ ಪ್ರವಾಸ ತೂಗುಯ್ಯಿಲೆಯಲ್ಲಿದೆ. ಶಾಕಿಬ್ ಅಲ್ ಹಸನ್, ಮಹ್ಮೂದುಲ್ಲಾ ಹಾಗೂ ಮುಶ್ಫಿಕುರ್ರಹೀಂ ಸಹಿತ ದೇಶದ ಪ್ರಮುಖ ಆಟಗಾರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 50ಕ್ಕೂ ಅಧಿಕ ದೇಶೀಯ ಆಟಗಾರರು ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ. ಕ್ರಿಕೆಟ್ ಚಟುವಟಿಕೆಯ ಬಹಿಷ್ಕಾರದ ಬೆದರಿಕೆ ಈಗ ನಡೆಯುತ್ತಿರುವ ರಾಷ್ಟ್ರೀಯ ಕ್ರಿಕೆಟ್ ಲೀಗ್ ಮೇಲೆ ನೇರ ಪರಿಣಾಮಬೀರಲಿದೆ. ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾದ ತರಬೇತಿ ಶಿಬಿರವೂ ಗೊಂದಲಕ್ಕೆ ಸಿಲುಕಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News