ಹಿರಿಯ ಪತ್ರಕರ್ತ ಸಿ ರಾಘವಾಚಾರಿ ನಿಧನ

Update: 2019-10-28 17:01 GMT

ಅಮರಾವತಿ, ಅ. 28: ಹಿರಿಯ ಪತ್ರಕರ್ತ ಸಿ. ರಾಘವಾಚಾರಿ ದೀರ್ಘ ಕಾಲದ ಅನಾರೋಗ್ಯದ ಬಳಿಕ ಸೋಮವಾರ ಬೆಳಗ್ಗೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

 ರಾಘವಾಚಾರಿ ಅವರು 1970ರಿಂದ 30 ವರ್ಷಗಳ ಕಾಲ ತೆಲುಗು ದಿನಪತ್ರಿಕೆ ‘ವಿಶಾಲಾಂಧ್ರ’ದ ಸಂಪಾದಕರಾಗಿದ್ದರು. ವಾರಂಗಲ್ ಜಿಲ್ಲೆಯವರಾದ ತೆಲಂಗಾಣದಲ್ಲಿ ನೆಲೆಸಿದ್ದ ರಾಘವಾಚಾರಿ, ಸಿಪಿಐಯ ವಿದ್ಯಾರ್ಥಿ ಒಕ್ಕೂಟ ಎಐಎಸ್‌ಎಫ್‌ನ ನಾಯಕರಾಗಿದ್ದರು. ಅನಂತರ ಅದರ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಪಾರವಾಗಿ ಓದಿಕೊಂಡಿದ್ದ ಹಾಗೂ ಉತ್ತಮ ಬರೆಹಗಾರರಾಗಿದ್ದ ರಾಘವಾಚಾರಿ ಸಿಪಿಐ ನಡೆಸುತ್ತಿರುವ ‘ವಿಶಾಲಾಂಧ್ರ’ದ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಅಲ್ಪ ಸಮಯದಲ್ಲಿ ಅವರು ಪತ್ರಿಕೆಯ ಸಂಪಾದಕರಾಗಿ ನಿಯೋಜಿತರಾಗಿದ್ದರು.

ಅನಂತರ ಸುಮಾರು 30 ವರ್ಷಗಳ ಕಾಲ ಅವರು ಅದರ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ವ್ಯಾಪಕ ಜ್ಞಾನ ಹಾಗೂ ಗಮನ ಸೆಳೆಯುವ ಸಂಪಾದಕೀಯದಿಂದ ರಾಘವಾಚಾರಿ ಜನಪ್ರಿಯರಾಗಿದ್ದರು. ಕೆಲವು ಸಮಯದಿಂದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ವಾರ ಅವರನ್ನು ಚಿಕಿತ್ಸೆಗಾಗಿ ಹೈದರಾಬಾದ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News