ಹಣಕಾಸು ವಿಚಾರ: ಯುವಕನ ಹತ್ಯೆ

Update: 2019-10-31 15:54 GMT

ಬೆಂಗಳೂರು, ಅ.31: ಹಣಕಾಸು ವಿಚಾರವಾಗಿ ಯುವಕನನ್ನು ಹತ್ಯೆ ಮಾಡಿರುವ ಘಟನೆ ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ನಡೆದಿದೆ.

ಮೃತನನ್ನು ರಮೇಶ್(22) ಎಂದು ಗುರುತಿಸಲಾಗಿದೆ. ಹಣಕಾಸು ವಿಚಾರವಾಗಿ ಎಸ್‌ಬಿಎಂ ಮುಖ್ಯ ರಸ್ತೆಯ ನೂರ್‌ಪಾಷ ಎಂಬುವರ ಮನೆ ಬಳಿ ಮೂವರು ದುಷ್ಕರ್ಮಿಗಳು ರಮೇಶ್ ಜೊತೆಗೆ ಜಗಳ ತೆಗೆದು ದೊಣ್ಣೆಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ರಮೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಆರೋಪಿಗಳಾದ ವಿಷ್ಣು, ರಾಮ್‌ಪಾಲ್ ಮತ್ತು ಮೋಹನ್ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಕೆ.ಆರ್.ಪುರಂ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News