ಕೋರ್ಟ್ ಆವರಣದಲ್ಲಿ ವಕೀಲರು-ಪೊಲೀಸರ ನಡುವೆ ಘರ್ಷಣೆ: ವಾಹನಕ್ಕೆ ಬೆಂಕಿ

Update: 2019-11-02 17:12 GMT

ಹೊಸದಿಲ್ಲಿ,ನ.2: ವಾಹನ ನಿಲುಗಡೆ ವಿಚಾರವಾಗಿ ನ್ಯಾಯವಾದಿಗಳು ಹಾಗೂ ಪೊಲೀಸರ ನಡುವೆ ಇಲ್ಲಿನ ತೀಸ್ ಹಝಾರಿ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಒಂದು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಟಲಾಗಿದೆಯೆಂದು ವರದಿಯಾಗಿದೆ.

ಘರ್ಷಣೆಯಲ್ಲಿ ನ್ಯಾಯವಾದಿಯೊಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

  ವಾಹನ ಪಾರ್ಕಿಂಗ್ ವಿಚಾರವಾಗಿ ಕೆಲವು ನ್ಯಾಯವಾದಿಗಳು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಉಂಟಾದ ವಾಗ್ವಾದವು ಘರ್ಷಣೆಗೆ ತಿರುಗಿತೆಂದು ವರದಿಗಳು ತಿಳಿಸಿವೆ. ಆದಾಗ್ಯೂ ಹೊಡೆದಾಟಕ್ಕೆ ನೈಜ ಕಾರಣವೇನೆಂಬುದನ್ನು ಇನ್ನಷ್ಟೇ ದೃಢಪಡಿಸಿಕೊಳ್ಳಬೇಕಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News