ಶಂಕರ ಮರಾಠೆ
Update: 2019-11-10 17:24 GMT
ಬಜ್ಪೆ : ಕಟೀಲು ಪದವೀಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಶಂಕರ ಮರಾಠೆಯವರು ಅನಾರೋಗ್ಯದಿಂದ ರವಿವಾರ ನಿಧನರಾದರು.
ಮೂಲತಃ ಕಾರ್ಕಳ ದುರ್ಗದವರಾದ ಮರಾಠೆಯವರು ಎಕ್ಕಾರಿನಲ್ಲಿ ವಾಸವಾಗಿದ್ದುಕೊಂಡು ಜ್ಯೋತಿಷಿಯೂ ಅಗಿದ್ದರು. ಕಟೀಲು ಪದವಿ ಪೂರ್ವ ಕಾಲೇಜಿನಲ್ಲಿ ಮೂವತ್ತು ವರುಷಗಳಿಂದ ಸಂಸ್ಕೃತ ಅಧ್ಯಾಪಕರಾಗಿ, ಯೋಗ ಶಿಕ್ಷಕರಾಗಿದ್ದರು. ಮೃತರು ಪತ್ನಿ ಓರ್ವ ಪುತ್ರ ಓರ್ವ ಪುತ್ರಿಯನ್ನು ಅಗಲಿದ್ದಾರೆ.