ಕೆನರಾ ನಾಲೆಡ್ಜ್ ಚಾಂಪ್ ಕ್ವಿಝ್:ಅದಿತಿ-ಹಿತೇಶ್‌ಗೆ ಅಗ್ರ ಸ್ಥಾನ

Update: 2019-11-10 17:30 GMT

ಬೆಂಗಳೂರು : ಮಕ್ಕಳ ದಿನಾಚರಣೆ ಮತ್ತು ಬ್ಯಾಂಕಿನ ಸ್ಥಾಪಕರ ದಿನಾಚರಣೆಯ ಅಂಗವಾಗಿ ಕೆನರಾ ಬ್ಯಾಂಕ್ ರವಿವಾರ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಕ್ವಿಝ್ ಸ್ಪರ್ಧೆ ‘ಕೆನರಾ ನಾಲೆಡ್ಜ್ ಚಾಂಪ್ 2019’ನ ಫೈನಲ್‌ನ್ನು ಆಯೋಜಿಸಿತ್ತು.

ದೇಶಾದ್ಯಂತ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಗೆದ್ದಿದ್ದ 22 ತಂಡಗಳ 44 ವಿದ್ಯಾರ್ಥಿಗಳು ಫೈನಲ್‌ನಲ್ಲಿ ಭಾಗಿಯಾಗಿದ್ದರು.

ಜೈಪುರದ ಅದಿತಿ ಸಿಂಗ್ ಮತ್ತು ಹಿತೇಶ ರಾಜ್ವಾನಿ ಮೊದಲ ಸ್ಥಾನ ಪಡೆದು 1ಲ.ರೂ.ಬಹುಮಾನವನ್ನು ತಮ್ಮದಾಗಿಸಿಕೊಂಡರು. ಕೊಚ್ಚಿಯ ವೈ.ಎಸ್.ಮ್ಯಾಥ್ಯೂ ಮತ್ತು ಎಸ್.ಎಸ್.ವಾರಿಯರ್ ಅವರು ಪ್ರಥಮ ರನರ್‌ಅಪ್ (60,000 ರೂ.) ಹಾಗೂ ಕೋಲ್ಕತಾದ ಅಯಾನ್ ತಾಕಿರ್ ಮತ್ತು ಶೇಖ್ ಅಹ್ಮದ್ ಅವರು ದ್ವಿತೀಯ ರನರ್‌ಅಪ್ (40,000 ರೂ.) ಆಗಿ ಮೂಡಿಬಂದರು.

ಕೆನರಾ ಬ್ಯಾಂಕಿನ ಎಮ್‌ಡಿ ಹಾಗೂ ಸಿಇಒ ಆರ್.ಎ.ಶಂಕರನಾರಾಯಣ ಅವರು ವಿಜೇತರಿಗೆ ಟ್ರೋಫಿಗಳು, ಪ್ರಮಾಣಪತ್ರಗಳು ಮತ್ತು ನಗದು ಬಹುಮಾನಗಳನ್ನು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News