‘ಚೌಕಿದಾರ್ ಚೋರ್ ಹೈ’ ವಾದದಲ್ಲಿ ಬದಲಾವಣೆ ಇಲ್ಲ: ಕಾಂಗ್ರೆಸ್

Update: 2019-11-15 16:11 GMT

ಬೆಂಗಳೂರು, ನ.15: ‘ಚೌಕಿದಾರ್ ಚೋರ್ ಹೈ’ ಎಂಬ ನಮ್ಮ ವಾದದಲ್ಲಿ ಯಾವುದೇ ಬದಲಾವಣೆ ಇಲ್ಲ. ಸತ್ಯಾಸತ್ಯತೆ ದೇಶದ ಜನರಿಗೆ ತಿಳಿಯಬೇಕು ಎನ್ನುವುದಾದರೆ, ನರೇಂದ್ರ ಮೋದಿ ಸರಕಾರ ರಫೇಲ್ ಒಪ್ಪಂದದಲ್ಲಿ ಅಕ್ರಮ ಎಸಗಿಲ್ಲ ಎಂದಾದಲ್ಲಿ, ಈ ಕೂಡಲೇ ರಫೇಲ್ ಒಪ್ಪಂದವನ್ನ ತನಿಖೆಗೆ ಒಳಪಡಿಸಲಿ. ಇದಕ್ಕಾಗಿ ಜಂಟಿ ಸಂಸದೀಯ ಸಮಿತಿ ರಚಿಸಲಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News