ಬೆಂಗಳೂರು: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸ್ಮರಣಾರ್ಥ ವೈದ್ಯಕೀಯ ಶಿಬಿರ

Update: 2019-11-18 16:07 GMT

ಬೆಂಗಳೂರು, ನ.18: ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸ್ಮರಣಾರ್ಥವಾಗಿ ಜೆಜೆ ನಗರದ ಅಲ್ ಅಝ್ಹರ್ ಫೌಂಡೇಷನ್ ಸ್ಕೂಲ್​​ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

ಎಸಿಬಿ ಬೆಂಗಳೂರು ಎಸ್ಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ಮಧುಕರ್ ಶೆಟ್ಟಿ ಅಭಿಮಾನಿಗಳು ಶಿಬಿರ ಆಯೋಜಿಸಿದ್ದರು. ಶಿಬಿರದಲ್ಲಿ ಹೃದ್ರೋಗ, ಸಕ್ಕರೆ ಖಾಯಿಲೆ, ದಂತ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ಉಚಿತ ತಪಾಸಣೆ ನಡೆಸಲಾಯಿತು.

ಸುಗುಣ ಆಸ್ಪತ್ರೆ, ಸ್ಮೈಲ್ ಇನ್ಸ್​​ಟಿಟ್ಯೂಟ್, ವಿಜಯನಗರ ಆಸ್ಪತ್ರೆ ಹಾಗೂ ಎನ್​ಸಿಆರ್​ಡಿ ಸಂಸ್ಥೆಗಳು ಶಿಬಿರದಲ್ಲಿ ಸಹಕಾರ ನೀಡಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News