ಬೆಂಗಳೂರು ಟೆಕ್ ಸಮ್ಮಿಟ್: ಗಮನ ಸೆಳೆದ ಜೈವಿಕ ಶುದ್ಧೀಕರಣ ಉತ್ಪನ್ನ ಪ್ರದರ್ಶನ

Update: 2019-11-18 18:13 GMT

ಬೆಂಗಳೂರು, ನ.18: ಸ್ವಚ್ಛತಾ ಕಾರ್ಯಗಳಿಗೆ ಹಲವಾರು ಉಪಕರಣಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದರೂ ಸಹ ಜೈವಿಕ ಉತ್ಪನ್ನದಿಂದ ತಯಾರಿಸಲ್ಪಟ್ಟಿರುವ ಉತ್ಪನ್ನಗಳು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಮಲ್ಟಿಪ್ಲೆಕ್ಸ್ ಬಯೋಟೆಕ್ ಪ್ರೈ.ಲಿ. ಸ್ವಚ್ಛತಾ ಕಾರ್ಯಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಿರುವ ಶುದ್ಧಿ ಎಂಬ ಹೆಸರಿನ ಜೈವಿಕ ಉತ್ಪನ್ನವನ್ನು ಪ್ರದರ್ಶನಕ್ಕಿಡಲಾಗಿದೆ.

ಶುದ್ದಿಯು ಸೂಕ್ಷ್ಮಾಣು ಜೀವಿಗಳನ್ನು ಗುರಿಯಾಗಿಟ್ಟುಕೊಂಡು ಸಿದ್ಧಪಡಿಸಿದ್ದು, ಇದನ್ನು ನೀರಿನ ಶುದ್ಧತೆ ಹಾಗೂ ಬಯೋರೆಮಿಡಿಯೇಷನ್‌ಗಾಗಿ ಕೇಂದ್ರೀಕರಿಸಲಾಗಿದೆ. ದ್ರಾವಣ ಹಾಗೂ ಪೌಡರ್ ಎರಡೂ ಮಾದರಿಯಲ್ಲಿ ಸಿಗುತ್ತದೆ ಎಂದು ಸಂಸ್ಥೆಯ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲೆಲ್ಲಿ ಬಳಸಬಹುದು: ಶುದ್ಧಿ ಎಂಬ ಶುದ್ಧೀಕರಣ ಉತ್ಪನ್ನವನ್ನು ಸಾಮಾನ್ಯವಾಗಿ ನೋಡುವಂತಹ ಕೆರೆ, ಮೀನು ಸಂಗ್ರಹ ಕೊಳ, ಈಜು ಕೊಳ, ನೀರಿನ ಸಂಸ್ಕರಣಾ ಘಟಕಗಳಲ್ಲಿ ಬಳಕೆ ಮಾಡಬಹುದು. ಅಲ್ಲದೆ, ನೀರಿನ ಮೂಲಗಳನ್ನು ಜೈವಿಕವಾಗಿ ಸ್ಪಚ್ಛಗೊಳಿಸಲು ಬಳಸಬಹುದಾಗಿದೆ.

ಇಷ್ಟೇ ಅಲ್ಲದೆ, ಗೃಹೋಪಯೋಗಿ ಶೌಚಾಲಯ, ವಾಹನ ಸ್ಪಚ್ಛತೆಯಂತಹ ಇತರೆ ಸ್ಪಚ್ಛತಾ ಕಾರ್ಯಗಳಲ್ಲಿ ಬಳಸಬಹುದಾಗಿದೆ. ಒಂದು ಲೀ. ನೀರಿಗೆ ಒಂದು ಹನಿಯಷ್ಟು ಅಥವಾ ಒಂದು ಎಂ.ಎಲ್‌ನಷ್ಟು ಹಾಕಬೇಕು. ಇನ್ನು ಈ ಉತ್ಪನ್ನ ಹಾಕಿ ಬಳಸಿದ ನೀರನ್ನು ನೇರವಾಗಿ ಗಿಡಗಳಿಗೆ ಹಾಕಬಹುದಾಗಿದೆ.

ಎಷ್ಟು ಪ್ರಮಾಣ ಬಳಕೆ: ಒಂದು ಕ್ಯೂಬಿಕ್ ಮೀಟರ್ ನೀರಿಗೆ (ಒಂದು ಸಾವಿರ ಲೀ.) ನೂರು ಎಂಎಲ್‌ನಷ್ಟು ದ್ರಾವಣ ಅಥವಾ ಎರಡು ನೂರು ಗ್ರಾಂನಷ್ಟು ಪೌಡರ್ ಹಾಕಬೇಕು. ಈ ಉತ್ಪನ್ನ ನೀರಿಗೆ ಸೇರಿದ ಕೂಡಲೇ ಅದರೊಳಗಿನ ಸೂಕ್ಷ್ಮಾಣುಗಳು ನೀರಿನಲ್ಲಿರುವ ಗಡಸುತನವನ್ನು ಕಡಿಮೆ ಮಾಡುತ್ತವೆ. ಜತೆಗೆ ಪಾಚಿ, ಇತರೆ ತ್ಯಾಜ್ಯವನ್ನು ಕರಗಿಸಿ ಆ ನೀರಿನ ಆಮ್ಲಜನಕವನ್ನು ಹೆಚ್ಚಿಸುತ್ತವೆ. ಕೆರೆಗಳ ಸ್ಪಚ್ಛತೆಯನ್ನು ಸಂಪೂರ್ಣ ಜೈವಿಕವಾಗಿ ಸಾವಿರಾರು ರೂಪಾಯಿಗಳ ಖರ್ಚಿನಲ್ಲಿಯೇ ಮಾಡಬಹುದು ಎಂದು ತಯಾರಕರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News