2020ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟ

Update: 2019-11-22 13:50 GMT

ಬೆಂಗಳೂರು, ನ.22: ರಾಜ್ಯ ಸರಕಾರವು 2020ನೇ ಸಾಲಿಗೆ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಶುಕ್ರವಾರ ಪ್ರಕಟಿಸಿದೆ. ಜ.15ರಂದು ಮಕರ ಸಂಕ್ರಾಂತಿ ಹಬ್ಬ, ಫೆ.21ರಂದು ಮಹಾ ಶಿವರಾತ್ರಿ, ಮಾ.25ರಂದು ಯುಗಾದಿ ಹಬ್ಬ, ಎ.6ರಂದು ಮಹಾವೀರ ಜಯಂತಿ, ಎ.10ರಂದು ಗುಡ್‌ಫ್ರೈಡೆ, ಎ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ.

ಮೇ 1ರಂದು ಕಾರ್ಮಿಕ ದಿನಾಚರಣೆ, ಮೇ 25ರಂದು ರಂಝಾನ್, ಆ.1ರಂದು ಬಕ್ರೀದ್, ಆ.15ರಂದು ಸ್ವಾತಂತ್ರ ದಿನಾಚರಣೆ, ಸೆ.17ರಂದು ಮಹಾಲಯ ಅಮವಾಸ್ಯೆ, ಅ.2ರಂದು ಗಾಂಧಿ ಜಯಂತಿ, ಅ.26ರಂದು ವಿಜಯ ದಶಮಿ, ಅ.30ರಂದು ಈದ್ ಮಿಲಾದ್, ಅ.31ರಂದು ಮಹರ್ಷಿ ವಾಲ್ಮೀಕಿ ಜಯಂತಿ.

ನ.16ರಂದು ಬಲಿಪಾಡ್ಯಮಿ, ದೀಪಾವಳಿ, ಡಿ.3ರಂದು ಕನಕದಾಸ ಜಯಂತಿ, ಡಿ.25ರಂದು ಕ್ರಿಸ್‌ಮಸ್. ಈ ರಜಾಪಟ್ಟಿಯು ರವಿವಾರಗಳಂದು ಬರುವ ಗಣರಾಜ್ಯೋತ್ಸವ ಜ.26, ಬಸವ ಜಯಂತಿ/ಅಕ್ಷಯ ತೃತೀಯ ಎ.26, ಮೊಹರಂ ಕಡೆ ದಿನ ಆ.30, ಮಹಾನವಮಿ ಆಯುಧಪೂಜೆ ಅ.25, ಕನ್ನಡ ರಾಜ್ಯೋತ್ಸವ ನ.1 ಮತ್ತು ಎರಡನೇ ಶನಿವಾರದಂದು ಬರುವ ನರಕ ಚತುದರ್ಶಿ ನ.14 ಮತ್ತು ನಾಲ್ಕನೆ ಶನಿವಾರದಂದು ಬರುವ ವರಸಿದ್ಧಿ ವಿನಾಯಕ ವ್ರತ ಆ.22ರಂದು ರಜಾದಿನಗಳನ್ನೊಳಗೊಂಡಿರುವುದಿಲ್ಲ.

ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಇಸ್ಲಾಮಿಕ್ ಹಬ್ಬಗಳು ನಿಗದಿತ ದಿನಾಂಕಗಳಂದು ಬೀಳದಿದ್ದರೆ ಸರಕಾರಿ ಸೇವೆಯಲ್ಲಿರುವ ಮುಸ್ಲಿಮರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿನ ರಜೆ ಮಂಜೂರು ಮಾಡಬಹುದಾಗಿದೆ.

ಸೆ.3ರಂದು ಕೈಲ್ ಮುಹೂರ್ತ, ಅ.17ರಂದು ತುಲಾ ಸಂಕ್ರಮಣ ಹಾಗೂ ಡಿ.1ರಂದು ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

ರಾಜ್ಯ ಸರಕಾರಿ ನೌಕರರಿಗೆ ಪರಿಮಿತ ರಜಾದಿನಗಳು: ಜ.1ರಂದು ನೂತನ ವರ್ಷಾರಂಭ, ಫೆ.3ರಂದು ಮಾಧ್ವನವಮಿ, ಮಾ.9ರಂದು ಹೋಳಿ ಹಬ್ಬ, ಎ.2ರಂದು ಶ್ರೀರಾಮನವಮಿ, ಎ.9ರಂದು ಶಬೇ ಬರಾತ್, ಎ.13ರಂದು ಸೌರಮಾನ ಯುಗಾದಿ, ಎ.28ರಂದು ಶ್ರೀ ಶಂಕರಾಚಾರ್ಯ ಜಯಂತಿ, ಶ್ರೀ ರಾಮಾನುಜಾಚಾರ್ಯ ಜಯಂತಿ.

ಮೇ 7ರಂದು ಬುದ್ಧ ಪೂರ್ಣಿಮಾ, ಮೇ 20ರಂದು ಶಬೇ ಖದರ್, ಮೇ 22ರಂದು ಜಮಾತ್ ಉಲ್ ವಿದಾ, ಜು.31ರಂದು ವರಮಹಾಲಕ್ಷ್ಮಿ ಹಬ್ಬ, ಆ.11ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಆ.21ರಂದು ಸ್ವರ್ಣಗೌರಿ ವ್ರತ, ಆ.31ರಂದು ಓಣಂ ಹಬ್ಬ, ಅನಂತ ಪದ್ಮನಾಭ ವ್ರತ, ಋಗ್-ಉಪಾಕರ್ಮ, ಸೆ.1ರಂದು ಯಜುರ್ ಉಪಾಕರ್ಮ.

ಸೆ.2ರಂದು ಬ್ರಹ್ಮಶ್ರೀ ನಾರಾಯಣ ಗುರೂಜಿ ಜಯಂತಿ, ಸೆ.8ರಂದು ಕನ್ಯಾಮಾರಿಯಮ್ಮ ಜಯಂತಿ, ಅ.17ರಂದು ತುಲಾ ಸಂಕ್ರಮಣ, ನ.30ರಂದು ಗುರು ನಾನಕ್ ಜಯಂತಿ, ಡಿ.1ರಂದು ಹುತ್ತರಿ ಹಬ್ಬ, ಡಿ.24ರಂದು ಕ್ರಿಸ್‌ಮಸ್ ಈವ್.

ಎ.11ರಂದು ಹೋಲಿ ಸ್ಯಾಟರ್‌ಡೇ ಎರಡನೇ ಶನಿವಾರದಂದು, ಮಾ.29ರಂದು ದೇವರ ದಾಸಿಮಯ್ಯ ಜಯಂತಿ ರವಿವಾರ ಬರುವುದರಿಂದ ಹಾಗೂ ಸೆ.17ರಂದು ವಿಶ್ವ ಕರ್ಮ ಜಯಂತಿಯು ಮಹಾಲಯ ಅಮಾವಾಸ್ಯೆ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜೆ ದಿವಸ ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News